Webdunia - Bharat's app for daily news and videos

Install App

ವೈನ್ ಬಾಟಲಿ ಖರೀದಿಸಿದ ಗ್ರಾಹಕನಿಗೆ 1.79 ಲಕ್ಷ ರೂ. ವಂಚನೆ!

Webdunia
ಭಾನುವಾರ, 22 ಆಗಸ್ಟ್ 2021 (21:14 IST)

ಆನ್‍ಲೈನ್ ಮೂಲಕ ವೈನ್ ಬಾಟಲಿ ಖರೀದಿಸಿದ್ದ ಗ್ರಾಹನೊಬ್ಬನಿಗೆ ಸೈಬರ್ ಖದೀಮರು ಬರೊಬ್ಬರಿ 1.79 ಲಕ್ಷ ರೂ. ವಂಚಿಸಿರುವ ಘಟನೆ ನ

ಗರದಲ್ಲಿ ನಡೆದಿದೆ.

ಅಲಿ ಅಸ್ಗರ್ ರಸ್ತೆಯ ದಿ ಎಂಬೆಸ್ಸಿ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿರುವ 80 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಆ.19ರಂದು ವಿಭೂತಿಪುರದ ಕ್ರಿಸ್ಟಲ್ ವೈನ್ಸ್ ಪೆÇೀರ್ಟಲ್‍ನಲ್ಲಿ 1 ವೈನ್ ಬಾಟಲ್ ಆರ್ಡರ್ ಮಾಡಿದ್ದಾರೆ. ವಾಪಸ್ ಕರೆ ಮಾಡಿದ ಅಪರಿಚಿತ ನೀಲೇಶ್ ಚೌಧರಿ, ವೈನ್ ಶಾಪ್ ನೌಕರ ಎಂದು ಪರಿಚಯಿಸಿಕೊಂಡಿದ್ದಾನೆ.

ನಿವೃತ್ತ ಅಧಿಕಾರಿ ವೈನ್ ಬಾಟಲ್ ಜತೆಗೆ 1 ಪ್ಯಾಕೇಟ್ ಸಿಗರೇಟ್ ಸಹ ಆರ್ಡರ್ ಮಾಡಿದ್ದರು. ಒಟ್ಟಾರೆ ಬಿಲ್ 730 ರೂ. ಬಿಲ್ ಆಗಿತ್ತು. ಅದಕ್ಕೆ ನಿವೃತ್ತ ಅಧಿಕಾರಿ, ಪೇಟಿಎಂನಲ್ಲಿ ಬಿಲ್ ಪಾವತಿಗೆ ಮುಂದಾದಾಗ ನೀಲೇಶ್, ಪೇಟಿಎಮ್ ಸೇವೆ ಇಲ್ಲ. ಕ್ರೆಡಿಟ್ ಕಾರ್ಡ್‍ನಲ್ಲಿ ಪಾವತಿಗೆ ಸೂಚಿಸಿದ್ದಾನೆ. ಅದಕ್ಕೆ ಒಪ್ಪಿದ ಗ್ರಾಹಕ, ತನ್ನ ಕ್ರೆಡಿಟ್ ಕಾರ್ಡ್ ನಂಬರ್ ಕೇಳಿದಾಗ 99,860 ರೂ. ಮತ್ತು 31,000ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ.

ಗಾಬರಿಕೊಂಡ ಗ್ರಾಹಕ, ನೀಲೇಶ್‍ಗೆ ಕರೆ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ ವಂಚಕ, `ನಾನು ಮದ್ಯ ಸೇವನೆ ಮಾಡಿದ್ದು, ಗೊತ್ತಾಗದೆ ತಪ್ಪು ನಂಬರ್ ಒತ್ತಿದ್ದೇನೆ. ನಿಮ್ಮ ಬೇರೆ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ. ವಾಪಸ್ ಹಣ ಕಳುಹಿಸುತ್ತೇನೆ' ಎಂದು ಪುಸಲಾಯಿಸಿದ್ದಾನೆ. ಆಗ ನಿವೃತ್ತ ಅಧಿಕಾರಿ, ಮತ್ತೊಂದು ಕಾರ್ಡ್ ನಂಬರ್ ಕೊಟ್ಟಾಗ ಅದರಲ್ಲಿಯೂ 19,190 ರೂ. ಮತ್ತು 29,280 ರೂ. ಹಂತ- ಹಂತವಾಗಿ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿದ್ದಾನೆ. ಕೊನೆಗೆ ವಂಚನೆಗೊಳಗಾಗಿರುವುದು ನಿವೃತ್ತ ಅಧಿಕಾರಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿ ದೀರ್ಘಾವಧಿ ಪ್ರಧಾನಿ ಹೆಗ್ಗಳಿಕೆಗೆ ಪಾತ್ರವಾದ ನರೇಂದ್ರ ಮೋದಿ

ಉಡುಪಿಯಲ್ಲಿ ಮುಂದಿನ 2 ದಿನ ಭಾರೀ ಗಾಳಿ ಮಳೆ, ರೆಡ್ ಅಲರ್ಟ್ ಘೋಷಣೆ

ಪರಿಷ್ಕೃತ ಶಾಲಾ ಸಮಯವನ್ನು ಮುಂದುವರೆಸುವಂತೆ ಕೇರಳ ಸರ್ಕಾರ ಸೂಚನೆ

ಮೈಸೂರು ಮಹಾರಾಜರಿಗಿಂತಲೂ ಗ್ರೇಟ್ ನಮ್ಮಪ್ಪ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments