Select Your Language

Notifications

webdunia
webdunia
webdunia
webdunia

ಹೆಂಡತಿ ಬಗ್ಗೆ ಕೆಟ್ಟದಾಗಿ ಬೈದ ಎಂದು ಸ್ನೇಹಿತನನ್ನೇ ಕೊಂದ!

webdunia
ಬಳ್ಳಾರಿ , ಭಾನುವಾರ, 3 ಜುಲೈ 2022 (10:54 IST)
ಬಳ್ಳಾರಿ :  ಕಟ್ಟಡ ಕಾರ್ಮಿಕನೊಬ್ಬನ್ನ ಸ್ನೇಹಿತನೇ ಹತ್ಯೆ ಮಾಡಿದ ಘಟನೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಇಂದು(ಶನಿವಾರ) ನಡೆದಿದೆ. 
 
ಆಂಧ್ರದ ರಾಯದುರ್ಗ ತಾಲೂಕಿನ ಚದಂ ದೊಡ್ಡಿ ಗ್ರಾಮದ ತಮ್ಮಣ್ಣ (43) ಕೊಲೆಯಾದ ವ್ಯಕ್ತಿ ಅಂತ ತಿಳಿದು ಬಂದಿದೆ.

ಕುಡಿದ ಮತ್ತಿನಲ್ಲಿ ತಮ್ಮಣ್ಣನನ್ನ ಸ್ನೇಹಿತ ಶ್ರೀರಾಮ್ ಎಂಬ ವ್ಯಕ್ತಿಯೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಲ್ಲಿನಿಂದ ತಮ್ಮಣ್ಣನ ತಲೆಗೆ ಜಜ್ಜಿ ಶ್ರೀರಾಮ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಕೂಡಲೇ ಕೆಎಸ್ಆರ್ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. 

ಸ್ಥಳಕ್ಕಾಗಮಿಸಿದ ಬ್ರೂಸ್ ಪೇಟೆ ಪೊಲೀಸರು ಆರೋಪಿ ಶ್ರೀರಾಮನ ಬಂಧಿಸಿದ್ದಾರೆ. ಶ್ರಿರಾಮಮ ಹೆಂಡತಿ ಬಗ್ಗೆ  ತಮ್ಮಣ್ಣ ಕೆಟ್ಟದಾಗಿ ಬೈದಿದ್ದಕ್ಕೆ ಸಿಟ್ಟಿಗೆದ್ದು ಕಲ್ಲಿನಿಂದ ಹೊಡೆದೆ ಎಂದು ಆರೋಪಿ ಶ್ರೀರಾಮ ಹೇಳಿದ್ದಾನೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿಗರಿಗೆ ಆರ್ಟಿಓ ಅಧಿಕಾರಿಗಳಿಂದ ಶಾಕ್!