ಅವನು ಮನೆ ಬಿಟ್ಟು ಹೋಗಲಿಲ್ಲ: ಇವನು ಜೀವ ಉಳಿಸಲಿಲ್ಲ

Webdunia
ಶುಕ್ರವಾರ, 5 ಜುಲೈ 2019 (17:19 IST)
ಮನೆ ಬಿಟ್ಟು ಹೋಗು ಎಂದು ಹೇಳಿದರೂ ಹೋಗದವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಉಳ್ಳಾಲ ಹತ್ತಿರದ ಚೆಂಬುಗುಡ್ಡೆ ದೇವಸ್ಥಾನದ ಮುಂಭಾಗದಲ್ಲಿ ನಾರಾಯಣ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕೊಲೆಯಾದವನ ಸಂಬಂಧಿಯೇ ಕೊಲೆ ಮಾಡಿದ್ದಾಗಿ ತನಿಖೆಯಿಂದ ಕಂಡುಕೊಂಡಿದ್ದಾರೆ.

ರಾಜೇಶ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ್ ನ ತಾಯಿಯ ಅಣ್ಣನ ಮಗನಾಗಿರುವ ನಾರಾಯಣನು ಮನೆ ಬಿಟ್ಟು ಹೋಗುವ ಕುರಿತು ಹಲವು ಬಾರಿ ಜಗಳ ಆಗಿತ್ತು. ಆದರೆ ನಾರಾಯಣ ಮನೆ ಬಿಟ್ಟು ಹೋಗಿರಲಿಲ್ಲ. ರಾಜೇಶನ ತಾಯಿ ಲಲಿತಾ ಕಳೆದ 25 ವರ್ಷಗಳಿಂದ ಅವರ ಅಣ್ಣನ ಮಗ ನಾರಾಯಣನ ಜತೆ ಚೆಂಬುಗುಡ್ಡೆಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು.
ರಾಜೇಶ್ ತಾನು ಮದುವೆಯಾಗಬೇಕಿರುವ ಹಿನ್ನೆಲೆಯಲ್ಲಿ ಮನೆಬಿಟ್ಟು ಹೊರಡುವಂತೆ ನಾರಾಯಣಗೆ ತಿಳಿಸಿದ್ದಾರೆ.

ಆದರೆ ನಾರಾಯಣ ಹಾಗೂ ರಾಜೇಶ್ ನಡುವೆ ಜಗಳ ನಡೆದಿದೆ. ವಾಗ್ವಾದ ತಾರಕಕ್ಕೇರಿ ಕತ್ತಿಯಿಂದ ರಾಜೇಶ್ ನಾರಾಯಣನನ್ನು ಕೊಲೆಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ: ಮಹೇಶ್ ಟೆಂಗಿನಕಾಯಿ

ವಿದೇಶದಲ್ಲಿ ಗಾಂಧಿ ಜಪಿಸುವ ಪ್ರಧಾನಿ, ಭಾರತದಲ್ಲಿ ಅಪಚಾರ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ ನುಂಗಲು ಹವಣಿಸಿದ್ರು: ಆರ್ ಅಶೋಕ್

ದಿಡೀರನೇ ಆಸ್ಪತ್ರೆಗೆ ದಾಖಲಾಗದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಆಗಿದ್ದೇನು ಗೊತ್ತಾ

ಪ್ರಧಾನಿ ನರೇಂದ್ರ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಮುಂದಿನ ಸುದ್ದಿ
Show comments