Select Your Language

Notifications

webdunia
webdunia
webdunia
webdunia

ಹೆಚ್ ಡಿ ಕೆ ಹಸಿ ಸುಳ್ಳುಗಾರ: ಜಗದೀಶ್ ಶೆಟ್ಟರ ಆರೋಪ

ಹೆಚ್ ಡಿ ಕೆ ಹಸಿ ಸುಳ್ಳುಗಾರ: ಜಗದೀಶ್ ಶೆಟ್ಟರ ಆರೋಪ
ಹುಬ್ಬಳ್ಳಿ , ಭಾನುವಾರ, 22 ಜುಲೈ 2018 (15:33 IST)
ಸಿಎಂ ಕುಮಾರಸ್ವಾಮಿ ಅವರು ಹಸಿಸುಳ್ಳು ಹೇಳುವ ಕೆಲಸ ಮಾಡ್ತಾಯಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಅಸಮಾಧಾನ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಪಾಸ್ ನೀಡುವಂತೆ ಭರವಸೆ ನೀಡಿದ್ರು. ಸಿಎಂ ಕುಮಾರಸ್ವಾಮಿ ಅವರು ತಮ್ಮ ಚುನಾವಣಾ ಪ್ರಣಾಳಿಕೆ ತೆಗೆದು ನೋಡಲಿ ಗೊತ್ತಾಗುತ್ತೇ. ರೈತರ ಸಾಲ ಮನ್ನಾದಲ್ಲಿ ಸಾಕಷ್ಟು ಗೊಂದಲ ಮಾಡಿದ್ದಾರೆ ಸಿಎಂ ಕುಮಾರಸ್ವಾಮಿ ಎಂದು ಹರಿಹಾಯ್ದಿದ್ದಾರೆ.

ಚುನಾವಣಾ ಪ್ರಣಾಳಿಕೆಗೆ ಯಾವುದೇ ಕಿಮ್ಮತ್ತು ಇಲ್ಲಾ ಅಂತಾ ಆಕ್ರೋಶ ವ್ಯಕ್ತಪಡಿಸಿರುವ ಶೆಟ್ಟರ್, ಜನಾದೇಶದ ವಿರುದ್ಧವಾದ ಮೈತ್ರಿ ಸರ್ಕಾರ ಬಹಳ ದಿನ ನಡೆಯುವದಿಲ್ಲ ಎಂದಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿಪ್ರಧಾನಿ ಹೆಚ್. ಡಿ. ದೇವೇಗೌಡ ಲೋಕಸಭಾ ಚುನಾವಣೆಗೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೆ ಎಂದಾಗ ಕಾಂಗ್ರೆಸ್- ಜೆಡಿಎಸ್ ನಲ್ಲಿ ನಿರಂತರವಾಗಿ ಗೊಂದಲ ಮುಂದುವರದಿದೆ ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್ ಎಸ್ ಭರ್ತಿ: 101 ತೆಂಗಿನಕಾಯಿ ಒಡೆದ ಹೋರಾಟಗಾರ