Webdunia - Bharat's app for daily news and videos

Install App

ಮಂಡ್ಯ ಗೆಲ್ಲಲು HDD ಮಾಸ್ಟರ್​​ ಪ್ಲ್ಯಾನ್​​

Webdunia
ಮಂಗಳವಾರ, 14 ಮಾರ್ಚ್ 2023 (16:34 IST)
ಪ್ರದಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆಗೆ ಆಗಮಿಸಿ, ಭರ್ಜರಿ ಮತಭೇಟೆ ನಡೆಸಿದ್ರು. ದಳಪರಿಗಳ ಕೋಟೆಯಲ್ಲಿ BJP ಮಿಂಚಿನ ಸಂಚಾರ JDS ಕಾರ್ಯಕರ್ತರಲ್ಲಿ ನಡುಕ ಹುಟ್ಟಿಸಿದೆ.. ಈ ಹಿನ್ನೆಲೆಯಲ್ಲಿ JDS ವರಿಷ್ಠರು ಅಲರ್ಟ್​ ಆಗಿದ್ದು, ಮಂಡ್ಯ ಜಿಲ್ಲೆ JDS ಜನಪ್ರತಿನಿಧಿಗಳ ಜೊತೆ ಮಾಜಿ ಪ್ರದಾನಿ H.D ದೇವೇಗೌಡರು ಸಭೆ ನಡೆಸಿದ್ದಾರೆ. ತಮ್ಮ ಭದ್ರಕೋಟೆಯನ್ನ ಉಳಿಸಿಕೊಳ್ಳಲು HDD ಪ್ಲ್ಯಾನ್ ಮಾಡಿದ್ದು, ಅನಾರೋಗ್ಯದ ಮಧ್ಯೆಯೂ ಮಂಡ್ಯ ಜನಪ್ರತಿನಿಧಿಗಳ ಜೊತೆ ಮೀಟಿಂಗ್‌ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆದಿದ್ದು, ಸಿ.ಎಸ್.ಪುಟ್ಟರಾಜು,D.C. ತಮ್ಮಣ್ಣ, ಶ್ರೀನಿವಾಸ್‌, ಸುರೇಶ್‌ಗೌಡ, ಶ್ರೀಕಂಠಯ್ಯ, ಅಪ್ಪಾಜಿ ಗೌಡ, ಅನ್ನದಾನಿ ಜೊತೆ HDD ಸಮಾಲೋಚನೆ ನಡೆಸಿದ್ದಾರೆ.. ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನ ಮತ್ತಷ್ಟು ಬಲಪಡಿಸಿ, 7 ಕ್ಷೇತ್ರಗಳನ್ನ ಗೆಲ್ಲಲು ಬೇಕಾದ ತಂತ್ರಗಳನ್ನು ಅನುಸರಿಸಿ ಎಂದು ದೇವೇಗೌಡರು ಕರೆ ನೀಡಿದ್ದಾರೆ ಎನ್ನಲಾಗಿದೆ.. ಪ್ರತೀ 10 ದಿನಕ್ಕೊಮ್ಮೆ ಮಂಡ್ಯದ ಸಂಪೂರ್ಣ ವರದಿ ನೀಡುವಂತೆ ಪ್ರತಿನಿಧಿಗಳಿಗೆ ತಿಳಿಸಿದ್ದು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಂತೆ HHD ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಜಲಪಾತದಲ್ಲಿ ರೊಮ್ಯಾಂಟಿಕ್ ಆಗಿ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಬೆನ್ನಲ್ಲೇ ನಡೆಯಿತು ದುರಂತ: Video

ಮಾಡೋದೆಲ್ಲಾ ಮಾಡಿ ದಲಿತ ಕಾರ್ಡ್ ಬಳಸಿ ಪ್ರಕರಣ ಮುಚ್ಚಿ ಹಾಕಲು ನೋಡೋದು: ನಾಗೇಂದ್ರ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ಜಿಮ್ ಮಾಡುತ್ತಿದ್ದಾಗಲೇ ಕುಸಿದು ಅಲ್ಲೇ ಮರಣ: ವೈರಲ್ ಆಯ್ತು ವೈದ್ಯರೊಬ್ಬರ ಕೊನೆಯ ಕ್ಷಣ Video

ತರಗತಿಯಲ್ಲಿ ವಿದ್ಯಾರ್ಥಿಗೆ ಮನಬಂದಂತೆ ಹೊಡೆದ ಶಿಕ್ಷಕ: ಕ್ರೂರ ಕೃತ್ಯದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ Video

ಮುಂದಿನ ಸುದ್ದಿ
Show comments