Select Your Language

Notifications

webdunia
webdunia
webdunia
webdunia

ಚಾಮರಾಜಪೇಟೆಯಲ್ಲಿ ಡಬ್ಬಾ ಹೊರುತ್ತಿದ್ದವ ಜಮೀರ್ ಅಹಮ್ಮದ್: ಎಚ್ ಡಿ ರೇವಣ್ಣ

ಚಾಮರಾಜಪೇಟೆಯಲ್ಲಿ ಡಬ್ಬಾ ಹೊರುತ್ತಿದ್ದವ ಜಮೀರ್ ಅಹಮ್ಮದ್: ಎಚ್ ಡಿ ರೇವಣ್ಣ
ಬೆಂಗಳೂರು , ಗುರುವಾರ, 5 ಅಕ್ಟೋಬರ್ 2017 (11:54 IST)
ಬೆಂಗಳೂರು: ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಕಾಂಗ್ರೆಸ್ ಸೇರಲು ಹೊರಟಿರುವ ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

 
ಜಮೀರ್ ವಿರುದ್ಧ ಏಕವಚನದ ಪ್ರಯೋಗ ನಡೆಸಿರುವ ರೇವಣ್ಣ ಅವನನ್ನು ನಾನುಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಚಾಮರಾಜಪೇಟೆಯಲ್ಲಿ ಡಬ್ಬ ಹೊತ್ತುಕೊಂಡು ಹೋಗುತ್ತಿದ್ದ ಗಿರಾಕಿ ಅವನು. ಅವನನ್ನು ದೇವೇಗೌಡರಿಗೆ ಪರಿಚಯಿಸಿದ್ದೇ ನಾನು ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಜಮೀರ್ ಅಹಮ್ಮದ್ ಅವರನ್ನು ಹೊಗಳಿರುವುದನ್ನು ಲೇವಡಿ ಮಾಡಿರುವ ರೇವಣ್ಣ, ಕಾಂಗ್ರೆಸ್ ನಲ್ಲಿ ಮೇವು ಸೊಂಪಾಗಿದೆ. ಅದಕ್ಕೇ ಜಮೀರ್ ಅಲ್ಲಿಗೆ ಹೋಗುತ್ತಿದ್ದಾರೆ. ಆ ಪಕ್ಷದಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲ. ಅದಕ್ಕೇ ಜಮೀರ್ ರನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ರೇವಣ್ಣ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾ ಬಂದ್ರೆ ಜನ ಹುಚ್ಚೆದ್ದು ಕುಣಿಯುತ್ತಾರೆ: ಬಿಎಸ್ ಯಡಿಯೂರಪ್ಪ