Webdunia - Bharat's app for daily news and videos

Install App

ಬಿಎಸ್ ಯಡಿಯೂರಪ್ಪರನ್ನು ಹಾಡಿ ಹೊಗಳಿದ ಎಚ್ ಡಿ ಕುಮಾರಸ್ವಾಮಿ

Krishnaveni K
ಶನಿವಾರ, 22 ಜೂನ್ 2024 (15:10 IST)
ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಎನ್ ಡಿಎ ಸಂಸದರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಈ ಹಿಂದೆ ಬಿಜೆಪಿ ಜೊತೆಗೆ ರಾಜ್ಯದಲ್ಲಿ 20-20 ಸರ್ಕಾರ ಮಾಡಿದ್ದಕ್ಕೇ ನಾನು ಹೆಸರು ಗಳಿಸಿದೆ ಎಂದಿದ್ದಾರೆ.

ಈ ಹಿಂದೆ ಅಂದಿನ 20-20 ಸರ್ಕಾರ ನನ್ನ ಜೀವನದ ದೊಡ್ಡ ತಪ್ಪು ಎನ್ನುತ್ತಿದ್ದಾರೆ. ಆದರೆ ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಕೇಂದ್ರ ಮಟ್ಟದಲ್ಲಿ ಸಖ್ಯ ಬೆಳೆಸಿದ್ದು, ಇದೀಗ ಅಂದಿನ ಸರ್ಕಾರ ಮತ್ತು ಬಿಎಸ್ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಹಾಡಿ ಹೊಗಳಿದ್ದಾರೆ.

ಇಂದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂದು ಬಿಎಸ್ ವೈ ಜೊತೆ ಸರ್ಕಾರ ರಚಿಸಿದ್ದಕ್ಕೇ ನನಗೆ ರಾಜ್ಯದಲ್ಲಿ ಕೊಂಚ ಹೆಸರು ಮಾಡಲು ಸಾಧ್ಯವಾಯಿತು ಎಂದರು. ಅಂದು ಅಧಿಕಾರ ಕೊಡಲು ಆಗದೇ ಇದ್ದಿದ್ದು ಕೆಲವರು ಮಾಡಿದ ಕುತಂತ್ರದಿಂದಾಗಿ, ನನ್ನ ತಪ್ಪು ಅಗಿರಲಿಲ್ಲ ಎಂದರು.

ಇಂದು ಜನ ಬಿಜೆಪಿ-ಜೆಡಿಎಸ್ ಒಂದಾಗಿರಬೇಕೆಂದು ಬಯಸಿದ್ದಾರೆ. ಇದು ನನ್ನ ಸ್ವಂತ ಇಚ್ಛೆ ಕೂಡಾ. 2018 ರಲ್ಲೂ ನಾನು ಬಿಜೆಪಿ ಜೊತೆ ಅಧಿಕಾರ ಮಾಡಬೇಕು ಎಂದುಕೊಂಡಿದ್ದೆ. ಸ್ಥಳೀಯ ಮಟ್ಟದಿಂದಲೇ ನಮ್ಮ ಎರಡೂ ಪಕ್ಷಗಳೂ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಮಟ್ಟ ಹಾಕಬಹುದು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments