Select Your Language

Notifications

webdunia
webdunia
webdunia
webdunia

ಕಾರು ತಪಾಸಣೆ ಮಾಡಿದ ಪೊಲೀಸರ ಬೆವರಿಳಿಸಿದ ಹೆಚ್.ಡಿ.ಕುಮಾರಸ್ವಾಮಿ

ಕಾರು ತಪಾಸಣೆ ಮಾಡಿದ ಪೊಲೀಸರ ಬೆವರಿಳಿಸಿದ ಹೆಚ್.ಡಿ.ಕುಮಾರಸ್ವಾಮಿ
ಚಿಕ್ಕಬಳ್ಳಾಪುರ , ಮಂಗಳವಾರ, 26 ನವೆಂಬರ್ 2019 (19:45 IST)
ಉಪ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಪೊಲೀಸರ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿರೋ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಹತ್ತಿರದಲ್ಲಿ ಚುನಾವಣಾ ಕಣ್ಗಾವಲು ಸಮಿತಿ ತಂಡ ಹೆಚ್.ಡಿ.ಕೆ ಕಾರನ್ನು ತಪಾಸಣೆ ನಡೆಸಿದೆ.
ಆಗ ಏನೂ ಸಿಗದೇ ಕಾರು ಮುಂದೆ ಹೋಗಲು ಅನುವು ಮಾಡಿದ್ಧಾರೆ. ಆಗ ಮಾಜಿ ಸಿಎಂ ಪೊಲೀಸರ ಮೇಲೆ ರೇಗಾಡಿದ್ದಾರೆ.

ಅನರ್ಹ ಶಾಸಕ ಸುಧಾಕರ ಕಾರನ್ನು ಏಕೆ ತಪಾಸಣೆ ಮಾಡೋದಿಲ್ಲ. ಅವರ ಕಾರಿನಲ್ಲಿ ಎಲ್ಲವೂ ಇರುತ್ತವೆ.  ನಮ್ಮ ಕಾರಲ್ಲಿ ಏನೂ ಇಲ್ಲ ಎಂದರು.

ಬೈ ಎಲೆಕ್ಷನ್ ಬಳಿಕ ಬಿಜೆಪಿ ಸರಕಾರವೂ ಇರೋದಿಲ್ಲ. ಸುಧಾಕರ್ ಶಾಸಕನಾಗೋದಿಲ್ಲ. ಈ ವಿಷ್ಯ ತಿಳಿದುಕೊಂಡು ಕೆಲಸ ಮಾಡಿ ಅಂತ ಪೊಲೀಸರಿಗೆ ಹೆಚ್.ಡಿ.ಕೆ. ಟಾಂಗ್ ನೀಡಿ ಬುದ್ಧಿವಾದ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಅಕ್ರಮ ಸಂಬಂಧ ಹೊಂದಿವೆ ಎಂದ ಸಚಿವ