Select Your Language

Notifications

webdunia
webdunia
webdunia
webdunia

‘ಗಣಪತಿ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರದ ಬಳಿ ಪರಿಣಿತರಿದ್ದಾರೆ’

‘ಗಣಪತಿ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರದ ಬಳಿ ಪರಿಣಿತರಿದ್ದಾರೆ’
ಬೆಂಗಳೂರು , ಗುರುವಾರ, 24 ಆಗಸ್ಟ್ 2017 (12:54 IST)
ಬೆಂಗಳೂರು: ಡಿವೈಎಸ್ ಪಿ ಯಾಗಿದ್ದ ಗಣಪತಿ ಸಾವಿನ ಸತ್ಯಾಸತ್ಯತೆ ಬಯಲಿಗೆ ಬಾರದಂತೆ ತಡೆಯಲು ರಾಜ್ಯ ಸರ್ಕಾರದ ಬಳಿ ಪರಿಣಿತರ ತಂಡವೇ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ದೂರಿದ್ದಾರೆ.

 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ಪ್ರಕರಣ ಮುಚ್ಚಿ ಹಾಕುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಇಂತಹ ಪ್ರಕರಣಗಳನ್ನ ಮುಚ್ಚಿ ಹಾಕಲೆಂದೇ ಇವರ ಬಳಿ ಪರಿಣಿತರ ತಂಡವೇ ಇದೆ. ಕೆಂಪಯ್ಯನವರಂತಹವರು ಇರುವುದೇ ಇದಕ್ಕಾಗಿ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಎಂಕೆ ಗಣಪತಿ ಸಾವಿಗೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿತ್ತು ಎಂಬ ವರದಿಗಳ ಬೆನ್ನಲ್ಲಿ ಕುಮಾರ  ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ.. ಧೋನಿ ಬಗ್ಗೆ ಕಾಮೆಂಟ್ ಮಾಡೊದು ಕೊಹ್ಲಿಗೆ ಇಷ್ಟವಾಗ್ತಿಲ್ಲ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಲಯನ್ಸ್ ಜಿಯೋ ಫೋನ್ ಬುಕ್ಕಿಂಗ್ ಇಂದಿನಿಂದ ಆರಂಭ.. ಬುಕ್ ಮಾಡುವುದು ಹೇಗೆ ಗೊತ್ತಾ..?