Select Your Language

Notifications

webdunia
webdunia
webdunia
Thursday, 10 April 2025
webdunia

ಹೆಚ್.ಡಿ.ರೇವಣ್ಣ ವಿರುದ್ಧ ಸಿದ್ಧರಾಮಯ್ಯ ಗೆ ದೂರು ನೀಡಲು ಮುಂದಾದ ಹಾಸನ ಕಾಂಗ್ರೆಸ್ ಮುಖಂಡರು

ಬೆಂಗಳೂರು
ಬೆಂಗಳೂರು , ಗುರುವಾರ, 29 ನವೆಂಬರ್ 2018 (14:37 IST)
ಬೆಂಗಳೂರು : ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುತ್ತಲೇ , ಇದೀಗ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.


ಹೌದು. ಹೆಚ್.ಡಿ.ರೇವಣ್ಣ ವಿರುದ್ಧ ಸಿದ್ಧರಾಮಯ್ಯ ಗೆ ದೂರು ನೀಡಲು ಹಾಸನ ಕಾಂಗ್ರೆಸ್ ಮುಖಂಡರು ನಿರ್ಧಾರ ಮಾಡಿದ್ದಾರೆ. ರೇವಣ್ಣಗೆ ಕಡಿವಾಣ ಹಾಕಿ , ಇಲ್ಲವಾದರೆ ನಮ್ಮ ದಾರಿ ನಮಗೆ ಎಂದು ಗೋಪಾಲ ಸ್ವಾಮಿ, ಎಚ್.ಕೆ.ಮಹೇಶ್ ಸೇರಿದಂತೆ 50 ಕ್ಕೂ ಹೆಚ್ಚು ಹಾಸನ ಕಾಂಗ್ರೆಸ್ ಮುಖಂಡರು ದೂರು  ನೀಡಿದ್ದಾರೆ.


‘ರೇವಣ್ಣ ಕಿರುಕುಳ ತಡೆಯಲಾಗ್ತಿಲ್ಲ. ಹಾಸನದಲ್ಲಿ ಸಚಿವ ರೇವಣ್ಣನ ದಬ್ಬಾಳಿಕೆ ಹೆಚ್ಚಾಗಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇನ್ಮುಂದೆ ಇಂತಹ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ಸಮನ್ವಯ ಸಭೆಯಲ್ಲಿ ಚರ್ಚಿಸ್ತೇವೆ ಅಂತ ಸಿದ್ಧರಾಮಯ್ಯ ಹೇಳಿದ್ದಾರೆ’ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ​ನಲ್ಲಿ ಎಲ್ಲರಿಗೂ ಇಷ್ಟವಿದೆ - ಪ್ರಧಾನಿ ಇಮ್ರಾನ್​ ಖಾನ್