Select Your Language

Notifications

webdunia
webdunia
webdunia
webdunia

ಹರತಾಳು ಹಾಲಪ್ಪ ವಿರುದ್ಧ ಸಂಚು ನಡೆಸಿದವರ್ಯಾರು.. ವಕೀಲರ ಹೇಳಿಕೆ ಹೀಗಿತ್ತು..

ಹರತಾಳು ಹಾಲಪ್ಪ ವಿರುದ್ಧ ಸಂಚು ನಡೆಸಿದವರ್ಯಾರು.. ವಕೀಲರ ಹೇಳಿಕೆ ಹೀಗಿತ್ತು..
ಶಿವಮೊಗ್ಗ , ಗುರುವಾರ, 17 ಆಗಸ್ಟ್ 2017 (18:37 IST)
ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್ ಸಿಕ್ಕ ಬಗ್ಗೆ ಅವರ ವಕೀಲರಾದ ಶಂಕರಪ್ಪ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

6 ತಿಂಗಳ ಬಳಿಕ ಸಂತ್ರಸ್ತೆ ಅತ್ಯಾಚಾರಕ್ಕೆ ಸಾಕ್ಷಿಗಳಾದ ಬಟ್ಟೆಗಳನ್ನ ಪೊಲಿಸರಿಗೆ ಕೊಟ್ಟಿದ್ದಾರೆ. ಅತ್ಯಾಚಾರದ ಆರೋಪ ಮಾಡಿದ್ದ ದಿನ ಸಂತ್ರಸ್ತೆ ಪತಿ, ಮಕ್ಕಳು, ಭವ್ಯಾ ಎನ್ನುವವರ ಜೊತೆ ತಿರುಮಲ ಲಾಡ್ಜ್`ನಲ್ಲಿದ್ದರು. ಇದನ್ನ ಅವರೇ ಕೋರ್ಟ್`ನಲ್ಲಿ ಒಪ್ಪಿಕೊಂಡಿದ್ದಾರೆ. ಜೊತೆಗೆ, ಲಾಡ್ಜ್ ಸಿಸಿಟಿವಿ ವಿಡಿಯೋ ಸಹ ಅವರು ಲಾಡ್ಜ್`ನಲ್ಲಿದ್ದದ್ದು  ಸಾಬೀತಾಗಿದೆ. ಆದರೆ, ಬಟ್ಟೆ ಮೇಲೆ ವೀರ್ಯ ಕಂಡುಬಂದಿದ್ದು ಹೇಗೆ..? ಅತ್ಯಾಚಾರ ನಡೆದೇ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಇದರಲ್ಲಿ ರಾಜಕೀಯ ಸಂಚು ಇರುವುದು ಸಾಬೀತಾಗಿದೆ. ಅತ್ಯಾಚಾರದ ಆರೋಪ ಮಾಡಿದ್ದ ದಿನಕ್ಕೂ ಕೆಲ ದಿನಗಳ ಹಿಂದೆ ದೂರುದಾರರ ಪತಿಗೆ ರಾಜಕೀಯ ವ್ಯಕ್ತಿಗಳಿಂದ ಫೋನ್ ಕರೆ ಬಂದಿರುವುದನ್ನ ಕೋರ್ಟ್`ನಲ್ಲಿ ಸಾಬೀತು ಮಾಡಿದ್ದೇವೆ ಎಂದು ವಕೀಲರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ತೀರ್ಪಿನ ಬಳಿಕ ಹರತಾಳು ಹಾಲಪ್ಪ ಹೇಳಿದ್ದು.