Select Your Language

Notifications

webdunia
webdunia
webdunia
webdunia

ಕೋರ್ಟ್ ತೀರ್ಪಿನ ಬಳಿಕ ಹರತಾಳು ಹಾಲಪ್ಪ ಹೇಳಿದ್ದು.

ಕೋರ್ಟ್ ತೀರ್ಪಿನ ಬಳಿಕ ಹರತಾಳು ಹಾಲಪ್ಪ ಹೇಳಿದ್ದು.
ಶಿವಮೊಗ್ಗ , ಗುರುವಾರ, 17 ಆಗಸ್ಟ್ 2017 (17:55 IST)
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪನವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಹಾಲಪ್ಪ ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
 

ಇದು ಸತ್ಯಕ್ಕೆ ಸಿಕ್ಕ ಜಯ, ನನ್ನ ವಿರುದ್ಧ ವ್ಯವಸ್ಥಿತ ರಾಜಕೀಯ ಸಂಚು ನಡೆಸಲಾಗಿತ್ತು.  ನನ್ನ ವಿರುದ್ಧ ಸಂಚು ಮಾಡಿದವರಿಗೆ ನಿರಾಸೆಯಾಗಿದೆ.ನನ್ನ ವಿರುದ್ಧ ನೀಡಿದ್ದ ದೂರು ನೂರಕ್ಕೆ ನೂರರಷ್ಟು ಸುಳ್ಳು.ಕೆ ತೆರಳುವುದಾಗಿ ಹೇಳಿದ್ದಾರೆ.  ಅವತ್ತೂ ಸಹ ಅದೇ ಮಾತನ್ನ ಹೇಳಿದ್ದೆ, ಇವತ್ತೂ ಅದನ್ನೇ ಹೇಳುತ್ತಿದ್ದೇನೆ ಎಂದು ಹಾಲಪ್ಪ ಹೇಳಿದ್ದಾರೆ. ಅವತ್ತೂ ಕೂಡ ಹಲವರು ಇದೊಂದು ಸಂಚು ಎಂದು ಹೇಳಿದ್ದರು. ಈಗ ಅದು ಸಾಬೀತಾಗಿದೆ ಹರತಾಳು ಹಾಲಪ್ಪ ಹೇಳಿದ್ದಾರೆ.

ಜಾಮೀನು ಕೊಡುವಾಗಲೇ ಪ್ರಕರಣದಲ್ಲಿ ರಾಜಕೀಯ ಸಂಚಿರುವ ಹಾಗಿದೆ ತನಿಖೆ ಮಾಡಿ ಎಂದು ಹೈಕೋರ್ಟ್ ಹೇಳಿತ್ತು. ಅದು ಈಗ ಸಾಬೀತಾಗಿದೆ. ಇದೇವೇಳೆ, ತನಗೆ ಬೆಂಬಲ ನೀಡಿದ ಪಕ್ಷದ ನಾಯಕರು, ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ನಾಳೆ ಬೆಳಗ್ಗೆ ನಾನು ನಂಬುವ ಸಿಗಂದೂರೇಶ್ವರಿ ದರ್ಶನಕ್ಕೆ ತೆರಳುತ್ತಿರುವುದಾಗಿ ಹರತಾಳು ಹಾಲಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಲಪ್ಪಗೆ ಕ್ಲಿನ್ ಚಿಟ್