Select Your Language

Notifications

webdunia
webdunia
webdunia
webdunia

2 ದಿನಗಳಿಂದ ಬಿಜೆಪಿ ನಾಯಕರ ಕೈಗೆ ಸಿಗದೇ ಓಡಾಡುತ್ತಿರುವ ಹಾಲಪ್ಪ, ‘ಕೈ’ ಹಿಡಿತಾರಾ?!

2 ದಿನಗಳಿಂದ ಬಿಜೆಪಿ ನಾಯಕರ ಕೈಗೆ ಸಿಗದೇ ಓಡಾಡುತ್ತಿರುವ ಹಾಲಪ್ಪ, ‘ಕೈ’ ಹಿಡಿತಾರಾ?!
ಶಿವಮೊಗ್ಗ , ಸೋಮವಾರ, 2 ಏಪ್ರಿಲ್ 2018 (12:02 IST)
ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಗಾಗಿ ಭಾರೀ ಫೈಟ್ ನಡೆಯುತ್ತಿದ್ದು, ಅಸಮಾಧಾನದ ಬೆಂಕಿಗೆ ದೊಡ್ಡ ವಿಕೆಟ್ ಉರುಳುವ ಸೂಚನೆ ಹಾಲಪ್ಪ ರೂಪದಲ್ಲಿ ಕಂಡುಬರುತ್ತಿದೆ.
 

ಸೊರಬದಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಹಾಲಪ್ಪ ಇದೀಗ ಬಿಜೆಪಿ ತೊರೆಯುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 2 ದಿನಗಳಿಂದ ಬಿಜೆಪಿ ನಾಯಕರ ಕೈಗೆ ಸಿಗದೇ ಓಡಾಡುತ್ತಿರುವ ಹಾಲಪ್ಪ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ಬಂದಿದೆ.

ಇದಕ್ಕೆ ಸರಿಯಾಗಿ, ಸಿಎಂ ಸಿದ್ದರಾಮಯ್ಯ ಕೂಡಾ ನಿನ್ನೆ ಹಾಲಪ್ಪ ಪರವಾಗಿ ಮಾತನಾಡಿದ್ದರು. ಕಾಂಗ್ರೆಸ್ ಕೂಡಾ ಹಾಲಪ್ಪ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಲಪ್ಪ ಮನ ಒಲಿಸಿ ಸಾಗರ ಟಿಕೆಟ್ ನೀಡುವ ಭರವಸೆ ನೀಡಲು ಸೂಚಿಸಿದ್ದಾರೆ. ಆದರೆ ಹಾಲಪ್ಪ ಇದೀಗ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಲಕ್ಷಣ ಕಾಣುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ 30 ರೊಳಗೆ ವಿಶೇಷ ಘಟನೆ ನಡೆಯಲಿದೆ ನೋಡುತ್ತಿರಿ: ಸಸ್ಪೆನ್ಸ್ ಕೊಟ್ಟ ದೇವೇಗೌಡರು!