Select Your Language

Notifications

webdunia
webdunia
webdunia
webdunia

ಹ್ಯಾಕರ್​ ಶ್ರೀಕಿ ನನಗೂ ಸಂಭಂದವಿಲ್ಲ-ವಿಷ್ಣು ಭಟ್ ಹೊಸ ಕಥೆ

ಹ್ಯಾಕರ್​ ಶ್ರೀಕಿ ನನಗೂ ಸಂಭಂದವಿಲ್ಲ-ವಿಷ್ಣು ಭಟ್ ಹೊಸ ಕಥೆ
bangalore , ಸೋಮವಾರ, 8 ನವೆಂಬರ್ 2021 (19:27 IST)
ಬೆಂಗಳೂರು: ಭೀಮಾ ಜ್ಯುವಲ್ಲರ್ಸ್ ಮಾಲೀಕನ​​ ಮಗ ವಿಷ್ಣು ಭಟ್​ ಹಾಗೂ ಹ್ಯಾಕರ್​ ಶ್ರೀಕಿ ಹೋಟೆಲ್​ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ಚಿಸ್ಟ್​ ಸಿಗುತ್ತಿದ್ದು, ಇದೀಗ ಪೊಲೀಸ್​ ಬಂಧನದಲ್ಲಿರುವ ವಿಷ್ಣು ಭಟ್​ ನನಗೆ ಶ್ರೀಕಿ ಅಂದರೆ ಯಾರು ಎಂದು ಗೊತ್ತೇ ಇಲ್ಲ ಎಂದಿರುವ ಮಾಹಿತಿ ದೊರೆತಿದೆ.
 
ಸ್ನೇಹಿತ ಅಭಯ್ ನನ್ನು ಭೇಟಿಯಾಗಲು ರಾಯಲ್ ಆರ್ಚಿಡ್ ಹೋಟೆಲ್ ಗೆ ಬಂದಿದ್ದೆ ಎಂದು ಪೊಲೀಸರಿಗೆ ಹೊಸ ಕಥೆ ಹೇಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹೋಟೆಲ್ ಒಳಗೆ ಹೋದಾಗ ಲಿಫ್ಟ್ ಹತ್ತಿ ಅಭಯ್ ಇದ್ದ ರೂಂ ಕಡೆ ಹೊರಟಿದ್ದೆ, ಆದರೆ ನಶೆಯಲ್ಲಿದ್ದ ಕಾರಣ ಅಭಯ್ ಇದ್ದ ರೂಂ ಮಿಸ್ಸಾಗಿ ಶ್ರೀಕಿ ರೂಂ ಬಾಗಿಲು ತಟ್ಟಿದೆ. ಲಿಫ್ಟ್ ನಲ್ಲೇ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದಕ್ಕೆ  ಹೋಟೆಲ್ ಸಿಬ್ಬಂದಿ ಹೊಯ್ಸಳಕ್ಕೆ ಕರೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ.
 
ಪೊಲೀಸರು ಹೋಗೋದಕ್ಕೂ ಶ್ರೀಕಿ ಬಾಗಿಲು ತೆಗೆಯೋದಕ್ಕೂ ಒಂದೇ ಟೈಮಿಂಗ್ಸ್ ಆಗಿತ್ತು. ಈ ವೇಳೆ ಶ್ರೀಕಿ‌ ಹಾಗೂ ನನ್ನ ನಡುವೆ ಮಾತಿಗೆ ಮಾತು‌ ಬೆಳೆದು ತಳ್ಳಾಟವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಶ್ರೀಕಿ ಹಾಗೂ ನನ್ನನ್ನು ಠಾಣೆಗೆ ಕರೆತಂದರು ಎಂದು ವಿಷ್ಣು ಭಟ್​ ವಿಚಾರಣೆ ವೇಳೆ ಎಸಿಪಿ ಕುಮಾರ್ ಮುಂದೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
sriki

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಅಂತ್ಯಸಂಸ್ಕಾರದ ಸಮಯದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ ಪತ್ನಿ ಅಶ್ವಿನಿ ಗೃಹ ಸಚಿವರಿಗೆ ಪತ್ರ