Select Your Language

Notifications

webdunia
webdunia
webdunia
webdunia

ರೇಣುಕಾಚಾರ್ಯ ಹೇಳಿಕೆಗೆ ಕಿಡಿ ಕಾರಿದ ಎಚ್.ವಿಶ್ವನಾಥ್

ರೇಣುಕಾಚಾರ್ಯ ಹೇಳಿಕೆಗೆ ಕಿಡಿ ಕಾರಿದ ಎಚ್.ವಿಶ್ವನಾಥ್
ಮಡಿಕೇರಿ , ಗುರುವಾರ, 26 ನವೆಂಬರ್ 2020 (12:47 IST)
ಮಡಿಕೇರಿ : 105 ಶಾಸಕರು ಇದ್ದಿದ್ದರಿಂದ ಸರ್ಕಾರ ರಚನೆಯಾಗಿದೆ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಇದ್ದಿದ್ದರಿಂದ ಸರ್ಕಾರ ರಚನೆಯಾಗಿದೆ. ಯಾರೋ ಕೆಲವರಿಂದ ಸರ್ಕಾರ ರಚನೆ ಆಗಿಲ್ಲ. ವಿನಾಕಾರಣ ಗೊಂದಲ ಮೂಡಿಸೋದು ಬೇಡ ಎಂದು ಹೇಳಿದ್ದಾರೆ.

ಹಾಗೇ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನಮಗೆ ಆತುರ ಇಲ್ಲ. ಅನ್ಯಾಯ ಆಗದಂತೆ ಅವಕಾಶ ಕೊಡಬೇಕು. ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಉಗ್ರ ದಾಳಿಗೆ ಇಂದು 12 ನೇ ವರ್ಷ