ಆಯುಧ ಪೂಜೆಗೆ ಗನ್, ತುಪಾಕಿ ಬಳಕೆ: ಪೊಲೀಸ್ ಇಲಾಖೆಯಿಂದ ನೋಟಿಸ್

Webdunia
ಭಾನುವಾರ, 21 ಅಕ್ಟೋಬರ್ 2018 (14:18 IST)
ಆಯುಧ ಪೂಜೆಗೆ  ಗನ್ ಹಾಗೂ ತುಫಾಕಿ ಗಳನ್ನು ಇಟ್ಟು ಪೂಜೆ ಮಾಡಿದ ಕುಟುಂಬವೊಂದು ಇದೀಗ  ಪೇಚಿಗೆ ಸಿಲುಕಿಕೊಂಡಿದೆ. ಪೊಲೀಸ್ ಇಲಾಖೆ ನೋಟೀಸ್ ಜಾರಿ ಮಾಡಿದೆ.

ದಾವಣಗೆರೆಯ ಹಳೇ ಕುಂದುವಾಡದಲ್ಲಿ ದೊಡ್ಡಪ್ಪ ಅವರ ಮಕ್ಕಳಾದ  ದಯಾನಂದ್ ಗಜಾನನ ಆಯುಧ ಪೂಜೆಯನ್ನು ಸಡಗರ  ಸಂಭ್ರಮದಿಂದ ಆಚರಿಸಿದರು. ಪೂಜೆ ನಂತರ ಪೂಜೆ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಿಸಿದರು. ದೊಡ್ಡಪ್ಪ ಅವರ ಮಗ ದಯಾನಂದ ಪೂಜೆ ನಂತರ ರಿವಾಲ್ವರ್, ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಹೀಗೆ ಗುಂಡು ಹಾರಿಸಿದ ಪೂಜೆ ಮಾಡಿದ ಪೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸಿದರು. ಆದರೆ ಎರಡು ದಿನಗಳ ನಂತರ ಹೀಗೆ ಹಾಕಿದ ಪೋಟೋ ವಿಡಿಯೋಗಳು ವೈರಲ್ ಆಗಿ ಇದೀಗ ದಾವಣಗೆರೆ ವಿದ್ಯಾನಗರ ಪೊಲೀಸರಿಂದ ನೋಟೀಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ನಿಮ್ಮಲ್ಲಿರುವ ಗನ್ ಗಳೆಷ್ಟು? ಲೈಸನ್ಸ್  ಹೊಂದಲಾಗಿದೆಯಾ ? ಗನ್ ಗಳನ್ನು ಹೊಂದಿರುವುದು ಯಾವ ಉದ್ದೇಶಕ್ಕೆ ಎಂಬ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. ಗನ್ ಗಳಿಗೆ ಪರ್ಮಿಟ್ ಹೊಂದಿದ್ರು ಸುಖಾಸುಮ್ಮನೆ  ಗಾಳಿಯಲ್ಲಿ ಗುಂಡು ಹಾರಿಸುವಂತಿಲ್ಲ ಎಂಬ ನಿಯಮವಿದೆ. ಆತ್ಮರಕ್ಷಣೆಗೆ ಇಟ್ಟುಕೊಂಡ ಗನ್ ಗಳಿಂದ  ಸಾರ್ವಜನಿಕ ಶಾಂತಿಗೆ ಯಾವ ಭಂಗ ಬರಬಾರದೆಂದು ಗನ್, ರೈಪಲ್ ಬಳಕೆ ಮಾಡಬೇಕು. ಆದರೆ ಆಯುಧ ಪೂಜೆ ಸಂಭ್ರಮದಲ್ಲಿ ಬಂದೂಕಗಳನ್ನು ಪ್ರದರ್ಶನ ಮಾಡಿದ ದೊಡ್ಡಪ್ಪನ ಕುಟುಂಬ ಇದೀಗ ವಿದ್ಯಾನಗರ ಪೊಲೀಸ್ ಠಾಣೆಗೆ ಲೈಸನ್ಸ್ ಹಾಜರುಪಡಿಸಬೇಕು.

ಆದರೆ  ಚಿತ್ರದಲ್ಲಿ ಕಂಡುಬಂದಿರುವ ಎಲ್ಲಾ  ಗನ್  ಗಳಿಗೆ ಲೈಸನ್ಸ್ ಸಲ್ಲಿಸಿಲ್ಲವೆಂದು ಪೊಲೀಸ ಮೂಲಗಳು ತಿಳಿಸಿವೆ.  ವಿದ್ಯಾನಗರ ಪೊಲೀಸ್ ಠಾಣೆಗೆ  1 ಪಿಸ್ತೂಲ್ , 1 ಸಿಂಗಲ್ ಬ್ಯಾರಲ್ , 1 ಡಬಲ್ ಬ್ಯಾರಲ್  ಬಂದೂಕಿನ ಲೈಸನ್ಸ್ ಮಾತ್ರ  ಹಾಜರುಪಡಿಸಿದ್ದು ಉಳಿದ ಗನ್ ಗಳಿಗು ಪರವಾನಿಗೆ ಪತ್ರ ಸಲ್ಲಿಸಿಲ್ಲ. ಎಲ್ಲಾ ಗನ್ ಗಳಿಗೂ ಲೈಸನ್ಸ್ ಸಲ್ಲಿಸಬೇಕೆಂದು ಮತ್ತೊಮ್ಮೆ ಮೌಖಿಕ ಆದೇಶ ನೀಡಿದ್ದು, ದೊಡ್ಡಪ್ಪನ‌ ಕುಟುಂಬ ಏನು ಮಾಡುತ್ತದೋ ಕಾಯ್ದು ನೋಡಬೇಕಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments