Publish Date: Fri, 02 Mar 2018 (12:00 IST)
Updated Date: Fri, 02 Mar 2018 (12:23 IST)
ಹಾಸನ: ಕೂದಲೆಳೆಯ ಅಂತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾರಾಗಿದ್ದಾರೆ. ಹಾಸನದ ಹೊಳೆನರಸೀಪುರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ವೇಳೆ ನೂಕುನುಗ್ಗಲಿನಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಸಿಲುಕಿಕೊಂಡಿದ್ದರು.
ಹೊಳೆನರಸೀಪುರದ ರಥೋತ್ಸವದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿತ್ತು. ಭಕ್ತರು ಏಕಾಏಕಿ ರಥ ಎಳೆದಿದ್ರಿಂದ ನೂಕುನುಗ್ಗಲು ಉಂಟಾಗಿತ್ತು. ಹೀಗಾಗಿ ಈ ನೂಕುನುಗ್ಗಲಿನಲ್ಲಿ ಮಾಜಿ ಪ್ರಧಾನಿ ಎಚ್ ಡಿಡಿ ಕುಟುಂಬ ಸಿಲುಕಿ ಹಾಕಿಕೊಂಡಿತು. ತಕ್ಷಣವೇ ಪುತ್ರ ಎಚ್ .ಡಿ ರೇವಣ್ಣ, ಅಂಗರಕ್ಷರು ನೆರವಿಗೆ ಬಂದು ರಕ್ಷಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ