ಬೆಂಗಳೂರು ರಸ್ತೆ ಗುಂಡಿ ವಿವಾದ ಮುಚ್ಚಲು ಆರ್ ಎಸ್ಎಸ್ ವಿವಾದ ಎಳೆದು ಹಾಕಿತಾ ಸರ್ಕಾರ

Krishnaveni K
ಶುಕ್ರವಾರ, 17 ಅಕ್ಟೋಬರ್ 2025 (10:17 IST)
ಬೆಂಗಳೂರು: ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ವಿಚಾರವಾಗಿ ಹಲ್ ಚಲ್ ಎಬ್ಬಿಸುತ್ತಿರುವುದು ಬೆಂಗಳೂರು ರಸ್ತೆ ಗುಂಡಿಗಳಿಂದಾಗಿ ಸರ್ಕಾರಕ್ಕೆ ಆಗಿರುವ ಮುಜುಗರ ತಪ್ಪಿಸಲು ಎಂದು ಬಿಜೆಪಿ ಮತ್ತು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಮೊನ್ನೆ ಟ್ವೀಟ್ ಮಾಡಿ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದರು. ಈ ವಿಚಾರವಾಗಿ ಸಾರ್ವಜನಿಕರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ನಡುವೆಯೇ ಗೂಗಲ್ ಎಐ ಹೂಡಿಕೆ ಆಂಧ್ರಪ್ರದೇಶದ ಪಾಲಾಯಿತು.

ಇದರ ನಡುವೆಯೇ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದಕ್ಕಿದ್ದಂತೆ ಆರ್ ಎಸ್ಎಸ್ ವಿಚಾರವನ್ನು ಹೊರತೆಗೆದಿದ್ದರು. ಹೀಗಾಗಿ ಇದು ಬೆಂಗಳೂರು ರಸ್ತೆ ಗುಂಡಿ ಮತ್ತು ಗೂಗಲ್ ಎಐ ಹೂಡಿಕೆ ಕೈತಪ್ಪಿದ್ದ ವಿಚಾರ ಮರೆಮಾಚಲು ಮಾಡುತ್ತಿರುವ ಗಿಮಿಕ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪಬ್ಲಿಕ್ ಅಭಿಪ್ರಾಯಪಡುತ್ತಿದ್ದಾರೆ.

ಜನರ ಗಮನ ಬೇರೆಡೆ ಸೆಳೆಯಲು ಆರ್ ಎಸ್ಎಸ್ ನ್ನು ಟಾರ್ಗೆಟ್ ಮಾಡಿದ್ದಾರೆ. ಆರ್ ಎಸ್ಎಸ್ ವಿಚಾರ ತೆಗೆದರೆ ಬಿಜೆಪಿ ಕೂಡಾ ಅದರ ಹಿಂದೆಯೇ ಇರುತ್ತದೆ. ಮಾಧ್ಯಮಗಳೂ ಬೇರೆ ವಿಚಾರಗಳ ಬಗ್ಗೆ ಗಮನಕೊಡುವುದಿಲ್ಲ ಎಂದು ಈ ರೀತಿ ಮಾಡುತ್ತಿದ್ದರೆ ಎಂದು ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರದೀಪ್ ಈಶ್ವರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ, ಕಾರಣ ಇಲ್ಲಿದೆ

ತಮಿಳುನಾಡು ವಿಧಾನಸಭಾ ಚುನಾವಣೆ: ಗೃಹೋಪಯೋಗಿ ಕೂಪನ್‌ ಪ್ರಕಟಿಸಿದ ಉದಯನಿಧಿ ಸ್ಟಾಲಿನ್, ಎಷ್ಟು ಹಣ ಗೊತ್ತಾ

ಪ್ಲಾಟ್‌ಫಾರ್ಮ್‌ನಲ್ಲಿ ನಿಂತವರ ಮೇಲೆಯೇ ಎರಗಿದ ಬಸ್‌, ಎದೆ ಝಲ್ಲೆನಿಸುತ್ತದೆ, Video

ಅಹಿಂದ ಹೆಸರಲ್ಲಿ ಪ್ರಚಾರ ಪಡೆದ ಸಿದ್ದರಾಮಯ್ಯ ಅವರಿಗಾಗಿ ಏನೂ ಮಾಡಿಲ್ಲ: ಸುನಿಲ್ ಕುಮಾರ್‌

ತಪ್ಪಿಗಾಗಿ ಪ್ರತಿಭಟನಕಾರರಲ್ಲಿ ಕಿವಿ ಹಿಟ್ಟು ಕ್ಷಮೆ ಕೇಳಿದ್ದ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಜೀನಾಮೆ

ಮುಂದಿನ ಸುದ್ದಿ
Show comments