Webdunia - Bharat's app for daily news and videos

Install App

ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ

Webdunia
ಬುಧವಾರ, 28 ಡಿಸೆಂಬರ್ 2022 (16:11 IST)
ರಾಜ್ಯ ಪೊಲೀಸ್ ಇಲಾಖೆಯ ಸಬ್​ ಡಿವಿಷನ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಠಾಣೆಗಳ ಸಬ್ ಡಿವಿಷನ್​ಗಳನ್ನು ಹೆಚ್ಚಳ ಮಾಡಲಾಗಿದೆ. ಪೊಲೀಸ್ ಮಹಾ ನಿರ್ದೇಶಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಸಬ್​ ಡಿವಿಷನ್​ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಪಶ್ಚಿಮ ಸಂಚಾರ ಸಬ್​ ಡಿವಿಷನ್ ಮಾರ್ಪಡಿಸಿ ಆದೇಶ ನೀಡಿದೆ. ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್​ ಡಿವಿಷನ್​ ಕೂಡ ವಿಂಗಡಣೆ ಮಾಡಲಾಗಿದೆ. ಆಗ್ನೇಯ ಸಬ್​ ಡಿವಿಷನ್​ ಜತೆಗೆ ಆಡುಗೋಡಿ ಸಬ್​ ಡಿವಿಷನ್​ ರಚಿಸಲಾಗಿದೆ. ಹೊಸದಾಗಿ ಹೆಚ್​ಎಸ್​ಆರ್​ ಲೇಔಟ್​ ಸಬ್​ ಡಿವಿಷನ್​ ಸೇರ್ಪಡೆ ಮಾಡಲಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್​ ವಿಂಗಡಿಸಿ ಯಶವಂತಪುರ, ಪೀಣ್ಯ ಸಬ್​ ಡಿವಿಷನ್​ಗಳಾಗಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪದ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಚುನಾವಣಾ ಆಯೋಗ

ಧರ್ಮಸ್ಥಳ ಎಸ್ಐಟಿ ತನಿಖೆಯಲ್ಲಿ ಮಹತ್ವದ ನಿರ್ಧಾರ

ಧರ್ಮಸ್ಥಳ ವಿಚಾರದಲ್ಲಿ ಕ್ಷಮೆ ಕೇಳಿ ಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ದೇಶದಲ್ಲಿ ನಾನೇ ನಂ 1 ಗೃಹಸಚಿವ, ಹೇಳ್ಕೊಳ್ಳೋರು ಹೇಳ್ಕೊಳ್ಳಿ: ಡಾ ಜಿ ಪರಮೇಶ್ವರ್

ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಪೈಲೆಟ್‌ ಸಮಯ ಪ್ರಜ್ಞೆ ತಪ್ಪಿಸಿತು ದೊಡ್ಡ ದುರಂತ

ಮುಂದಿನ ಸುದ್ದಿ
Show comments