Select Your Language

Notifications

webdunia
webdunia
webdunia
webdunia

ಹಾಲು ಕರೆದು ಲಕ್ಷ ರೂಪಾಯಿ ಗೆದ್ದ ಗೋಪಾಲಕ

ಹಾಲು ಕರೆದು ಲಕ್ಷ ರೂಪಾಯಿ ಗೆದ್ದ ಗೋಪಾಲಕ
ಮಂಡ್ಯ , ಸೋಮವಾರ, 10 ಫೆಬ್ರವರಿ 2020 (14:15 IST)
ಹೆಚ್ಚು ಹಾಲು ಕರೆಯುವ ಸ್ಪರ್ಧೆಯು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಂಡ್ಯದ ಪಾಂಡವಪುರ  ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಕಾವೇರಿ ಗೋಪಾಲಕರ ಸಮಿತಿಯ ವತಿಯಿಂದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ನಡೆಯಿತು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರಗತಿಪರ ರೈತರು ತಮ್ಮ ಹಸುಗಳೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಕೆಜಿಎಫ್ ಚಲನಚಿತ್ರದ ಖಳನಟ ಗರುಡ ಅನಿಲ್ ಕುಮಾರ್ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಗೋಪಾಲಕರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಚಿವ ಡಾ.ನಾರಾಯಣಗೌಡ, ಗೋವುಗಳ ಸಾಕಾಣಿಕೆ ಹಾಗೂ ಸಂರಕ್ಷಣೆ, ಕ್ಷೀರಕ್ರಾಂತಿಗೆ ಹಾಲು ಕರೆಯುವ ಸ್ಪರ್ಧೆಯು ಪ್ರೋತ್ಸಾಹದಾಯಕವಾಗಿದೆ ಎಂದ್ರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗೋಪಾಲಕರಿಗೆ ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ ಬಹುಮಾನ 75 ಸಾವಿರ ರೂ., ತೃತೀಯ ಬಹುಮಾನ 50 ಸಾವಿರ ರೂ., ಚತುರ್ಥ ಬಹುಮಾನ 25 ಸಾವಿರ ರೂ., ಮತ್ತು ಐದನೇ ಬಹುಮಾನವಾಗಿ 10 ಸಾವಿರ ರೂಪಾಯಿ ನಗದು ಹಣ ಮತ್ತು ಪಾರಿತೋಷಕಗಳನ್ನು ವಿತರಿಸಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿ ಜೊತೆಗಿದ್ದ ಬೆತ್ತಲೆ ಫೋಟೋ ವೈರಲ್ ಮಾಡಿದ ಭೂಪ