Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮಿ ದೇವಿಗೆ ಚಿನ್ನದ ಮೀನು ಕಾಣಿಕೆ

ಮಹಾಲಕ್ಷ್ಮಿ ದೇವಿಗೆ ಚಿನ್ನದ ಮೀನು ಕಾಣಿಕೆ
bangalore , ಭಾನುವಾರ, 10 ಏಪ್ರಿಲ್ 2022 (19:16 IST)
ಉಡುಪಿ ಜಿಲ್ಲೆಯ ಹೆಸರಾಂತ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಯಿತು. ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾಗಿರುವ ಈ ಸರವು ಸುಮಾರು 400 ಗ್ರಾಂ ತೂಕವಿದ್ದು, ಅತ್ಯಾಕರ್ಷಕವಾಗಿದೆ. ಮೊಗವೀರ ಸಮುದಾಯದವರು ತಮ್ಮ ಕುಲವೃತ್ತಿಯಾದ ಮೀನುಗಾರಿಕೆಯ ಸ್ಮರಣಾರ್ಥ ಈ ಸರವನ್ನು ದೇವಿಗೆ ಸಮರ್ಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಹೊಂಬಾಳೆ ಫಿಲ್ಮ್ಸ್’ RCB ಜೊತೆ ಹೊಸ ಸಾಹಸ