Publish Date: Tue, 31 Jul 2018 (20:36 IST)
Updated Date: Tue, 31 Jul 2018 (20:39 IST)
ಆಹಾರ ವಿತರಣೆ ಕೇಂದ್ರದಲ್ಲಿ ಗೋಲ್ ಮಾಲ್ ನಡೆದಿದೆ. ಗೂಡ್ಸ್ ಗಾಡಿಯಲ್ಲಿ ಅಕ್ಕಿ ಸಾಗಿಸುವಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಬಲ್ ಗ್ರಾಮದ ಸೊಸೈಟಿಯಲ್ಲಿ ಘಟನೆ ನಡೆದಿದೆ.
ಆಡಳಿತ ಮಂಡಳಿ ಹಾಗೂ ಗುಮಾಸ್ತ ಸೇರಿ ಬೇರೆಡೆಗೆ ಅಕ್ಕಿ ಮೂಟೆ ಸಾಗಿಸುತ್ತಿದ್ದರು. KA- 15 -8916 ಸಂಖ್ಯೆಯ ಗೂಡ್ಸ್ ಗಾಡಿಯಲ್ಲಿ ಸಾಗಿಸುತ್ತಿದ್ದ ಅಕ್ಕಿ ಮೂಟೆಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.
ಅಕ್ಕಿ ಮೂಟೆಯನ್ನ ಗ್ರಾಮ ಪಂಚಾಯಿತಿ ಸದಸ್ಯರು ತಡೆಹಿಡಿದಿದ್ದಾರೆ. ಗ್ರಾ.ಪಂ ಸದಸ್ಯ ಕೃಷ್ಣಪ್ಪರ ಮೇಲೆ ಗೂಡ್ಸ್ ಗಾಡಿಯವರು ಹಲ್ಲೆ ನಡೆಸಿದ್ದಾರೆ. ಮೂವರು ಕಳ್ಳರ ಬೆದರಿಕೆ ನಡುವೆಯೂ ವಾಹನವನ್ನು ಕೃಷ್ಣಪ್ಪ ತಡೆಹಿಡಿದಿದ್ದಾರೆ.
ಅಕ್ರಮದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.