Select Your Language

Notifications

webdunia
webdunia
webdunia
Thursday, 24 April 2025
webdunia

‘ಕರ್ನಾಟಕಕ್ಕೆ ಮಹದಾಯಿಯ ಹನಿ ನೀರೂ ಕೊಡಲ್ಲ’

ಮಹದಾಯಿ ನದಿ ವಿವಾದ
ಪಣಜಿ , ಗುರುವಾರ, 28 ಡಿಸೆಂಬರ್ 2017 (09:41 IST)
ಪಣಜಿ: ಮಹದಾಯಿ ನದಿ ನೀರಿಗಾಗಿ ಕರ್ನಾಟಕದಲ್ಲಿ ರೈತರು ಹೋರಾಟ ಮಾಡುತ್ತಿದ್ದರೆ, ಅತ್ತ ಗೋವಾ ಸಚಿವರೊಬ್ಬರು ಕರ್ನಾಟಕಕ್ಕೆ ಹನಿ ನೀರೂ ಕೊಡಲ್ಲ ಎಂದಿದ್ದಾರೆ.
 

ನೀರು ಹಂಚಿಕೆ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿರುವ ಗೋವಾ ಬಿಜೆಪಿ ಸರ್ಕಾರದ ಸಚಿವ ವಿನೋದ್ ಪಾಲೇಕರ್ ಮಹದಾಯಿ ನದಿಯ ಹನಿ ನೀರೂ ನಮಗೆ ಅಗತ್ಯವಾಗಿದೆ. ಅದನ್ನು ಕಿಂಚಿತ್ತೂ ನೆರೆ ರಾಜ್ಯಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮಹದಾಯಿ ನೀರು ಗೋವಾ ಜನರಿಗೇ ಸಾಕಾಗುವುದಿಲ್ಲ. ಹಾಗಿರುವಾಗ ಕರ್ನಾಟಕಕ್ಕೆ ನಾವು ಯಾಕೆ ನೀರು ಬಿಟ್ಟು ಕೊಡಬೇಕು ಎಂದು ಸಚಿವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕರಾಳ ದಿನಾಚರಣೆಗೆ ಕರೆ