Select Your Language

Notifications

webdunia
webdunia
webdunia
webdunia

ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಕೊಡಿ

ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಕೊಡಿ
bangalore , ಬುಧವಾರ, 19 ಅಕ್ಟೋಬರ್ 2022 (15:17 IST)
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಫೈಟ್ ಮುಗಿಯುತ್ತಲೇ ಇಲ್ಲ. ಮೈದಾನದಲ್ಲಿ  ಕನ್ನಡ ರಾಜ್ಯೋತ್ಸವ ವಿವಾದ ಭುಗಿಲೇಳುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಲವು ಸಂಘಟನೆಗಳು ಪಟ್ಟು ಹಿಡಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಹೀಗಾಗಿ ಧ್ವಜಾರೋಹಣ,ಗಣೇಶೋತ್ಸವ ಮುಗಿದರೂ ಮೈದಾನದ ಗಲಾಟೆ  ಇನ್ನೂ ತಣ್ಣಗಾಗಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆ ಗೊಂಡಿರೋ ಹಿಂದೂಪರ ಸಂಘಟನೆಗಳು ಇದೀಗ  ಕನ್ನಡ ರಾಜ್ಯೋತ್ಸವ ಆಚರಣೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಮೈದಾನದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಹಿಂದೂ ಪರ ಸಂಘಟನೆಗಳು ಸಿದ್ದತೆ ನಡೆಸಿವೆ. ಈ ಬಗ್ಗೆ ಸರ್ಕಾರದ ಕದ ತಟ್ಟಿರೋ ಚಾಮರಾಜಪೇಟೆ ನಾಗರೀಕ ನಾಗರಿಕರ ಒಕ್ಕೂಟ ಅನುಮತಿ ಕೋರಿ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಕೂಡಾ ಇದೆ. ಸರ್ಕಾರ ಅನುಮತಿ ನೀಡಿದ್ರೆ ಕನ್ನಡ ರಾಜ್ಯೋತ್ಸವ ನಾಡಹಬ್ಬದ ರೀತಿ ಆಚರಣೆ ಮಾಡೋಕೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸಿದ್ದತೆ ನಡೆಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಿಗ್ಗೆ ಜೆಸಿಪಿ ಘರ್ಜನೆ - ಅನಧಿಕೃತ ಶೆಡ್ ತೆರವು ಮಾಡಿದ ಬಿಬಿಎಂಪಿ