Publish Date: Sat, 17 Jul 2021 (20:32 IST)
Updated Date: Sat, 17 Jul 2021 (20:34 IST)
ದೊಡ್ಡಬಳ್ಳಾಪುರದ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ
ಸರಕಾರದಿಂದ ಸಾಮೂಹಿಕ ವಿವಾಹಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟಿದ್ದ ಸರಳ ಗಗನ ಸಾಮೂಹಿಕ ವಿವಾಹಗಳನ್ನು ನಡೆಸಲು ಆಗಸ್ಟ್ ೧೩ ಮತ್ತು ಸೆಪ್ಟೆಂಬರ್ ೧೩ ರಂದು ಘೋಶಿಸಲಾಗಿದೆ.
ವರನಿಗೆ ೫೦೦೦ ವಧುವಿಗೆ ೧೦೦೦೦ ಮತ್ತು ವಧುವಿನ ತಾಳಿ ಎರಡು ಚಿನ್ನದ ಗುಂಡುಗಳಿಗಾಗಿ ೫೫ ಸಾವಿರ ಖರ್ಚು ಮಾಡಲಾಗುತ್ತಿದೆ. ಈ ಕಾರಣ ದೇವಾಲಯದ ಆಡಳಿತ ಮಂಡಳಿಯಿಂದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊರೊನಾ ಹಾವಳಿಯಿಂದ ಮದುವೆಗಳಿಗೆ, ವಧು ಹಾಗೂ ವರನ ಕುಟುಂಬದವರಿಗೆ ಈ ಆದೇಶವು ಸಂತಸ ತಂದಿದೆ.