Select Your Language

Notifications

webdunia
webdunia
webdunia
webdunia

ಮಣ್ಣಲ್ಲಿ ಮಣ್ಣಾದ ಸಿಎಂ ಜೇಷ್ಠಪುತ್ರ ರಾಕೇಶ್!

ಮಣ್ಣಲ್ಲಿ ಮಣ್ಣಾದ ಸಿಎಂ ಜೇಷ್ಠಪುತ್ರ ರಾಕೇಶ್!
ಮೈಸೂರು , ಸೋಮವಾರ, 1 ಆಗಸ್ಟ್ 2016 (18:43 IST)
ಹಾಲುಮತದ ಸಂಪ್ರದಾಯದಂತೆ ಮೈಸೂರಿನ ಹೊರವಲಯದಲ್ಲಿರುವ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಸಿಎಂ ಜೇಷ್ಠಪುತ್ರ ರಾಕೇಶ್ ಅವರ ಅಂತ್ಯಕ್ರಿಯೆ ಮಾಡಲಾಯಿತು.
ಕಾಗಿನೆಲೆ ಪೀಠದ ಕನಕಗುರು ನಿರಂಜನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆ ಈಶ್ವರಾನಂದ ಮಹಾಪುರ ಸ್ವಾಮೀಜಿ ಸೇರಿದಂತೆ ಎಲ್ಲ ಹಿಂದುಳಿದ ವರ್ಗದ ಮಹಸ್ವಾಮಿಗಳು ಭಾಗವಹಿಸಿ ಸಿಎಂ ಪುತ್ರ ರಾಕೇಶ್ ಅವರ ಅಂತಿಮ ಸಂಸ್ಕಾರವನ್ನು ನೇರವೇರಿಸಿದರು.
 
ಮೈಸೂರು ಹೊರವಲಯದ ಟಿ.ಕಾಟೂರಿನಲ್ಲಿ ರಾಕೇಶ್ ಅಂತ್ಯ ಸಂಸ್ಕಾರ ನಡೆಸುವ ಕುರಿತು ನಿರ್ಧಾರ ಕೈಗೊಂಡಿದ್ದರಿಂದ ಮಾಧ್ಯಮ ಮಿತ್ರರಿಗೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. 
 
ಸಿಎಂ ಪುತ್ರ ರಾಕೇಶ್ ಅಂತ್ಯ ಸಂಸ್ಕಾರದಲ್ಲಿ ಕುಟುಂಬ ವರ್ಗದವರು ಹಾಗೂ ಸ್ನೇಹಿತರು ಸೇರಿದಂತೆ ಹಲವು ಗಣ್ಯ ನಾಯಕರು ಪಾಲ್ಗೊಂಡಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮಟ್ಟಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ರಮ ಆಸ್ತಿಗಳಿಕೆ ಪ್ರಕರಣ: ಈಶ್ವರಪ್ಪ ಮನವಿ ತಿರಸ್ಕರಿಸಿದ ಹೈಕೋರ್ಟ್