Webdunia - Bharat's app for daily news and videos

Install App

ಮೇ 9ರಿಂದ ಮೈಕ್‌ ನಲ್ಲಿ ಮಹಾ ಆರತಿ ಅಭಿಯಾನ: ಪ್ರಮೋದ್‌ ಮುತಾಲಿಕ್

Webdunia
ಬುಧವಾರ, 20 ಏಪ್ರಿಲ್ 2022 (14:35 IST)
ಮೇ 9ರೊಳಗೆ ಮಸೀದಿಗಳಲ್ಲಿನ ಮೈಕ್‌ ಗಳನ್ನು ತೆರವುಗೊಳಿಸದೇ ಇದ್ದರೆ ರಾಜ್ಯಾದ್ಯಂತ ಮಹಾ ಆರತಿ ಅಭಿಯಾನ ಆರಂಭಿಸುವುದಾಗಿ ಶ್ರೀರಾಮ ಸೇನೆ ಎಚ್ಚರಿಸಿದೆ.

ಬೆಂಗಳೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಈ ವಿಷಯ ತಿಳಿಸಿದ್ದು, ಸರಕಾರ ಮಸೀದಿಗಳಲ್ಲಿ ಹಾಕಿರುವ ಮೈಕ್‌ ಗಳನ್ನು ತೆರವುಗೊಳಿಸುವ ಬಗ್ಗೆ ನೋಟಿಸ್‌ ನೀಡಿದ್ದೇವೆ ಎಂದು ನಾಟಕ ಮಾಡುತ್ತಿವೆ. ಮೇ ‌9ರೊಳಗೆ ಮೈಕ್‌ ತೆರವುಗೊಳಿಸದೇ ಇದ್ದರೆ ದೇವಸ್ಥಾನ ಮತ್ತು ಮಠಗಳಲ್ಲಿ ಮಹಾಆರತಿ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು.

ಮುಸ್ಲಿಮರ ರಂಜಾನ್‌ ಹಬ್ಬದ ದಿನವೇ ಅಕ್ಷಯ ತೃತೀಯ ಆಗಮಿಸಿದ್ದು, ಅಂದಿನಿಂದ ರಾಜ್ಯದ ಎಲ್ಲಾ ಮಂದಿರ, ಮಠಗಳು, ಮಹಾ ಆರತಿ ಪ್ರಯುಕ್ತ ಆಜಾದ್‌ ಮೊಳಗುವ ೫ ಸಮಯದಲ್ಲೂ ಹನುಮಾನ್‌ ಚಾಲಿಸ್‌ ಪಠಣ ಮಾಡಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೂ ಆಜಾನ್‌ ಸಮಯದಲ್ಲಿ ಹನುಮಾನ್‌ ಚಾಲಿಸ್‌ ಪಠಣ ಮಾಡಲು ನೂರಕ್ಕೂ ಹೆಚ್ಚು ದೇವಸ್ಥಾನ, 50ಕ್ಕೂ ಹೆಚ್ಚು ಮಠಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮುತಾಲಿಕ್‌ ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments