Select Your Language

Notifications

webdunia
webdunia
webdunia
webdunia

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದ ಮಾಜಿ ಶಾಸಕ…

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದ ಮಾಜಿ ಶಾಸಕ…
ತುಮಕೂರು , ಶುಕ್ರವಾರ, 29 ಮಾರ್ಚ್ 2019 (14:06 IST)
ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದು ಶಾಸಕರೊಬ್ಬರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನನ್ಮಕ್ಕಳು ಜೆಡಿಎಸ್ ನವರನ್ನ ಹೆದರಿಸ್ಬೇಕೆಂದು ಪ್ರಚೋದನೆ ನೀಡಿದ್ದಾರೆ. ಯಾವುದಕ್ಕೂ ಎದೆಗುಂದಬೇಡಿ ನಾನಿದಿನಿ ಎಂದ ಶಾಸಕ ಹೊಸ ವರಸೆ ತೆಗೆದಿದ್ದಾರೆ.

ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡನ‌ ಹೊಸ ವರಸೆ ಇದಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕಾರ್ಯಕರ್ತರ ಕುರಿತು ಮಾತನಾಡುವಾಗ ಶಾಸಕರ ಮಾತು ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ನವ್ರು ಕೌರವರಿದ್ದಾಗೆ,ಅವರ ವಿರುದ್ದ ಯುದ್ದ ಮಾಡಿ. ಕೃಷ್ಷ ಪರಮಾತ್ಮನ ಹಾಗೆ ನಿಮ್ಮ ರಕ್ಷಣೆಗೆ ನಾನಿದಿನಿ ಎಂದು ಅಭಯ ನೀಡಿದ್ರು.

ಜೆಡಿಎಸ್ ಸಂಹಾರ ಮಾಡೋಣ ನಿಂತು ಯುದ್ದಮಾಡಿ. ಪ್ರಚಾರಕ್ಕೆ ಬಂದ ವೇಳೆ ಕಿರುಚಿ, ಡಕಾಯಿತ ಅಂತಾ ಘೋಷಣೆ ಕೂಗಿ ಎಂದರು.

 ಕಳ್ಳರನ್ನ ತಂದು ದೇವೇಗೌಡ ಕ್ಷೇತ್ರಕ್ಕೆ ನಿಲ್ಲಿಸ್ತಾರೆ. ಲೂಟಿ ಮಾಡಿ ನಮಗೂ ಪಾಲು ಕೊಡಿ ಎಂದು ಗೌಡರು ಅವಕಾಶ ಕೊಡ್ತಾರೆ. ಕೊಳ್ಳೆ ಹೊಡೆದ ಹಣದಲ್ಲಿ ದೇವೇಗೌಡ್ರಿಗೂ ಪಾಲಿದೆಯಂತೆ. ಚುನಾವಣಾ ಪ್ರಚಾರಕ್ಕೆ ಬಂದ್ರೆ ಶಾಸಕ ಗೌರಿಶಂಕರ್ ಗೆ ಕಳ್ಳ ಎಂದು ಕೂಗಿ ಎಂದು ಪ್ರಚೋದನೆ ನೀಡಿದ್ರು.  




Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಗೆ ಪುನರ್ಜನ್ಮ ಕೊಟ್ಟಿದ್ದೇ ನಾನು ಎಂದ ಸಚಿವ