Publish Date: Sun, 22 Jul 2018 (21:20 IST)
Updated Date: Sun, 22 Jul 2018 (21:22 IST)
ಕೆ.ಬಿ. ಕೋಳಿವಾಡ ವಿರುದ್ಧ ಅರಣ್ಯ ಸಚಿವ ಶಂಕರ್ ಫುಲ್ ಗರಂ ಆಗಿದ್ದಾರೆ. ಕೋಳಿವಾಡರು ತಮ್ಮ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಅರೋಪ ಮಾಡುವುದನ್ನು ಬಿಡಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಒಂದು ಸಮುದಾಯಕ್ಕೆ ಮಾತ್ರ ನಾಯಕರಲ್ಲ. ಎಲ್ಲ ಸಮುದಾಯದ ನಾಯಕರು. ಅವರು ತಾರತಮ್ಯ ಮಾಡದೆ ಎಲ್ಲರ ಏಳಿಗೆಗಾಗಿ ದುಡಿದವರು. ಈ ಬಾರಿಯೂ ನಮ್ಮದೆ ಆದ ಪಕ್ಷದ ಸರ್ಕಾರ ಬರಬೇಕಾಗಿತ್ತು. ಆದ್ರೆ ಅಗಲಿಲ್ಲ. ಇನ್ನೊಂದು ಬಾರಿ ಅವರು ಮುಖ್ಯ ಮಂತ್ರಿಯಾಗುತ್ತಾರೆ. ಅದರಲ್ಲಿ ಅನುಮಾನ ಇಲ್ಲ ಎಂದು ಸಚಿವ ಶಂಕರ್ ಹೇಳಿದ್ದಾರೆ.
ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡರು ಇಲ್ಲದ ಆರೋಪಗಳನ್ನು ಸಿದ್ದರಾಮಯ್ಯನವರ ವಿರುದ್ಧ ಮಾಡವುದನ್ನು ಬಿಡಬೇಕು ಎಂದು ಹೇಳಿದ್ರು.