Select Your Language

Notifications

webdunia
webdunia
webdunia
webdunia

ಬೆಳಗ್ಗೆಯಿಂದಲೇ ಸಿಗುತ್ತೆ ಮೀನು : ಯಾಂತ್ರಿಕೃತ ದೋಣಿ ಮೀನುಗಾರಿಕೆಗೆ ಅವಕಾಶ

ಬೆಳಗ್ಗೆಯಿಂದಲೇ ಸಿಗುತ್ತೆ ಮೀನು : ಯಾಂತ್ರಿಕೃತ ದೋಣಿ ಮೀನುಗಾರಿಕೆಗೆ ಅವಕಾಶ
ಕಾರವಾರ , ಮಂಗಳವಾರ, 5 ಮೇ 2020 (16:14 IST)
ಮೀನು ಪ್ರಿಯರಿಗೆ ಲಾಕ್ ಡೌನ್ ಮೂರನೇ ಹಂತದ ವಿಸ್ತರಣೆಯಲ್ಲಿಯೂ ಖುಷಿ ಸುದ್ದಿ ಸಿಕ್ಕಿದೆ.

ಕಿತ್ತಳೆ ವಲಯದಲ್ಲಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳದ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯತನಕ ಯಾವುದೇ ಅಂಗಡಿ ತೆರೆಯುವಂತಿಲ್ಲ. ಹೀಗಂತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೀನುಗಾರರ ಬೇಡಿಕೆಯಂತೆ ಜಿಲ್ಲೆಯಲ್ಲಿ ಇನ್ನು ಮುಂದೆ ಭಟ್ಕಳ ತಾಲೂಕು ಹೊರತುಪಡಿಸಿ ಕೆಲವು ಷರತ್ತುಗಳನ್ನು ವಿಧಿಸಿ ಯಾಂತ್ರಿಕೃತ ಮೀನುಗಾರಿಕೆಗೂ ಅವಕಾಶ ನೀಡಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೇ 17 ರವರೆಗೆ ಈ ರೈಲು ಓಡೋದಿಲ್ಲ