Publish Date: Fri, 14 Dec 2018 (18:30 IST)
Updated Date: Fri, 14 Dec 2018 (18:32 IST)
ಟ್ರಾಕ್ಟರ್ ನ ಟ್ರಾಲಿಯಲ್ಲಿದ್ದ ಹುಲ್ಲಿಗೆ ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ.
ಟ್ರಾಲಿ ಸಮೇತ ಊರ ಹೊರಗೆ ಟ್ರಾಕ್ಟರ್ ನ್ನು ಚಾಲಕ ಕೊಂಡೊಯ್ದಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬೆಂಕಿ ಧಗ ಧಗನೇ ಹೊತ್ತಿ ಉರಿಯುತ್ತಿದ್ದರೂ ಹಾಗೆ ಟ್ರ್ಯಾಕ್ಟರ್ ಚಲಾಯುಸಿದ ಚಾಲಕ ಅದನ್ನು ಕೆರೆವರೆಗೂ ಚಲಾಯಿಸಿದ್ದಾರೆ.
ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರ್ಯಾಲಿಯನ್ನು ಎತ್ತಲು ಏರಲಿಫ್ಟ್ ಇಲ್ಲದ ಕಾರಣ ಊರ ಹೊರಗೆ ವೇಗವಾಗಿ ಟ್ರಾಕ್ಟರ್ ಕೊಂಡೋಯ್ದ ಚಾಲಕ ಅದನ್ನು ಕೆರೆ ನೀರಿನಲ್ಲಿ ಬಿಟ್ಟು ಬೆಂಕಿ ನಂದಿಸಲು ಯತ್ನಿಸಿದ್ದಾನೆ. ಶಾರ್ಟ್ ಸರ್ಕ್ಯೂಟ್ ನಿಂದ ಹುಲ್ಲಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.