Webdunia - Bharat's app for daily news and videos

Install App

ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮ, ಕಣ್ಣೀರಿಟ್ಟ ರೈತ ಕುಟುಂಬ..!

Webdunia
ಸೋಮವಾರ, 12 ನವೆಂಬರ್ 2018 (19:23 IST)
ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಂಪೂರ ಗ್ರಾಮದಲ್ಲಿ ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ದೇವಮ್ಮ ಗಂಡ ಭೀಮಶೆಪ್ಪ ಎಂಬುವವರಿಗೆ ಸೇರಿದ ಸಜ್ಜೆ ಗೂಡಿಗೆ ರಾತ್ರಿ ಬೆಂಕಿ ತಗುಲಿದ್ದು, ಬೆಂಕಿಯಲ್ಲಿ ಸಜ್ಜೆ ಗೂಡು ಸಂಪೂರ್ಣವಾಗಿ ಭಸ್ಮವಾಗಿದೆ.

ಸಜ್ಜೆ ಗೂಡಿಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈತ ಕುಟುಂಬ ಕಣ್ಣೀರಿಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ದುಃಖ ವ್ಯಕ್ತಪಡಿಸಿದೆ.

ಆಕಸ್ಮಿಕವೋ, ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ‌ ಹಚ್ಚಿದ್ದಾರೋ ಗೋತ್ತಿಲ್ಲ. ನಾವು ಸಜ್ಜೆ ತನೆಗಳನ್ನು ಮುರಿದು ಗುಂಪು ಹಾಕಿ ಸಜ್ಜೆ ರಾಶಿ ಮಾಡಲು‌ ಮುಂದಾಗಿದ್ದೇವು.  ರಾತ್ರೋ ರಾತ್ರಿ ಎರಡು ಸಜ್ಜೆ ಗೂಡಿನ‌ ತೆನೆಗಳು ಸುಟ್ಟಿದ್ದು ಅಪಾರ ನಷ್ಟವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಂಬಂಧಿಸಿದ ಇಲಾಖೆಯವರು ರೈತ ಕುಟುಂಬಕ್ಕೆ ನೆರವಾಗುವ ಕೆಲಸ ಮಾಡುವುದೋ ಕಾದು ನೋಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments