Select Your Language

Notifications

webdunia
webdunia
webdunia
webdunia

ಶ್ರೀಕಿ ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲು

ಶ್ರೀಕಿ ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲು
bangalore , ಭಾನುವಾರ, 7 ನವೆಂಬರ್ 2021 (20:31 IST)
ಬೆಂಗಳೂರು: ಬಿಟ್​​ ಕಾಯಿನ್​ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ.  ಗಲಾಟೆ ಮಾಡಿ ಪೊಲೀಸ್ ವಶದಲ್ಲಿದ್ದ ಶ್ರೀಕಿ, ವಿಷ್ಣುಭಟ್ ರನ್ನು ಈಗ ಬಂಧಿಸಲಾಗಿದೆ. 
 
ಮೆಡಿಕಲ್​ ಚೆಕಪ್​ ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭೀಮಾ ಜ್ಯುವೆಲರ್ಸ್​​ ಮಾಲೀಕನ ಮಗ ವಿಷ್ಣು ಭಟ್ ಎಂದು ತಿಳಿದು ಬಂದಿದೆ. 
 
ಮೆಡಿಕಲ್​ ಚೆಕಪ್​ನಲ್ಲಿ ಇಬ್ಬರೂ ಮದ್ಯ ಸೇವಿಸಿರೋದು ದೃಢ ಪಟ್ಟಿದೆ, ಶ್ರೀಕಿ ಮತ್ತು ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ‌. ಶರಣಪ್ಪ ಮಾಹಿತಿ ನೀಡಿದ್ದಾರೆ. 
 
ಕುಡಿದ ಅಮಲಿನಲ್ಲಿ ಗಲಾಟೆ: 
 
ಕುಡಿದ ಅಮಲಿನಲ್ಲಿದ್ದ ವಿಷ್ಣು ಭಟ್ ಗಲಾಟೆ ಮಾಡಿಕೊಂಡು, ಶ್ರೀಕಿ ಜೊತೆ ಸೇರಿ ಹೋಟೆಲ್ ಸಿಬ್ಬಂದಿ ಮೇಲೆ ಶನಿವಾರ  ಹಲ್ಲೆ ಮಾಡಿದ್ದರು. ಈ  ಹಿನ್ನೆಲೆಯಲ್ಲಿ ನಗರದ ಜೀವನ್ ಭೀಮಾನಗರ ಪೊಲೀಸರು ವಶಕ್ಕೆ ಪಡೆದಿದ್ದರು. 
 
ಪ್ರಭಾವಿಗಳಿಗೆ ನಡುಕ: 
 
ಶ್ರೀಕಿ, ವಿಷ್ಣುಭಟ್ ಬಂಧನದಿಂದಾಗಿ ಪ್ರಭಾವಿಗಳಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ
viki

Share this Story:

Follow Webdunia kannada

ಮುಂದಿನ ಸುದ್ದಿ

ವಾಯುಭಾರ ಕುಸಿತದ ಎಫೆಕ್ಟ್: ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ