Webdunia - Bharat's app for daily news and videos

Install App

ಕೋವಿಡ್ ನಿಂದ ಆರ್ಥಿಕ ಸಂಕಷ್ಟ

Webdunia
ಶನಿವಾರ, 26 ಮಾರ್ಚ್ 2022 (20:47 IST)
ಸತ್ತವರ ಹೆಸರಿನಲ್ಲಿ ಸರ್ಕಾರದಿಂದ ನೀಡಿದಂತ ಈ ಪರಿಹಾರದ ಹಣ ಬೇಡ. ರಾಜ್ಯದಲ್ಲಿ ಕೋವಿಡ್ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದ ಅನೇಕ ಜನರಿದ್ದಾರೆ. ಅವರಿಗೆ ಈ ಹಣವನ್ನು ಕೊಡಿ ಎಂಬುದಾಗಿ ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟಂತ ಜನರಿಗೆ ನೀಡಿದ ಪರಿಹಾರದ ಹಣವನ್ನು ವಾಪಾಸ್ ನೀಡಿ, ನೋವಿನಲ್ಲಿಯೂ ಮಾನವೀಯತೆಯನ್ನು ಅನೇಕ ಕುಟುಂಬಸ್ಥರು ಮೆರೆದಿದ್ದಾರೆ.
ಹೌದು.. ಕೋವಿಡ್ ನಿಂದ ಸಾವನ್ನಪ್ಪಿದಂತ ಕುಟುಂಬಸ್ಥರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಂದ ಸಾವನ್ನಪ್ಪಿದಂತ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಸ್ಥರಿಗೆ 1.50 ಲಕ್ಷ ಪರಿಹಾರವನ್ನು ಘೋಷಣೆ ಮಾಡಿತ್ತು.
 
ಈ ಪರಿಹಾರದ ಹಣವನ್ನು ಕೊರೋನಾದಿಂದ ಮೃತಪಟ್ಟವರಿಗೆ ನೀಡೋದಕ್ಕೆ ಹೋದಂತ ಸರ್ಕಾರಕ್ಕೆ, ಕುಟುಂಬಸ್ಥರು ನಮಗೆ ಸತ್ತವರ ಹೆಸರಿನಲ್ಲಿ ಸರ್ಕಾರದಿಂದ ನೀಡಿದಂತ ಈ ಪರಿಹಾರ ಬೇಡ. ಈ ಹಣವನ್ನು ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾಗಿರುವಂತ ಬಡ ಕುಟುಂಬಗಳಿಗೆ ನೀಡಬೇಕೆಂದು ಹಿಂದಿರುಗಿಸಿ, ಮಾನವೀಯತೆ ಮೆರೆದಿವೆ.
 
ಅಂದಹಾಗೇ ರಾಜಧಾನಿ ಬೆಂಗಳೂರು ಒಂದರಲ್ಲೇ 481 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ. ಬೆಂಗಳೂರಿನ 481 ಸೇರಿದಂತೆ ರಾಜ್ಯಾಧ್ಯಂತವೂ ಪರಿಹಾರ ಧನ ನಿರಾಕರಿಸೋ ಸಂಖ್ಯೆ ಏರಿಕೆಯಾಗಿದೆ. ಈ ಪರಿಹಾರದ ಹಣವನ್ನು ಸಂಕಷ್ಟದಲ್ಲಿರೋರಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.
 
ಯಾವ ಜಿಲ್ಲೆಯಲ್ಲಿ ಎಷ್ಟು ಕುಟುಂಬಗಳು ಕೋವಿಡ್ ಪರಿಹಾರ ಧನ ನಿರಾಕರಣೆ.?
 
ಹೀಗೆ ರಾಜ್ಯಾಧ್ಯಂತ ಒಟ್ಟು 893 ಕುಟುಂಬಗಳು ಕೋವಿಡ್ ಪರಿಹಾರ ಧನ ನಮಗೆ ಬೇಡ. ರಾಜ್ಯದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವಂತ ಬಡ ಕುಟುಂಬಗಳಿಗೆ ಹಣ ನೀಡಿ ಎಂಬುದಾಗಿ ಕುಟುಂಬದ ಮೃತರ ಸಾವಿನ ನೋವಿನಲ್ಲಿಯೂ ಮಾನವೀಯತೆಯನ್ನು ಕುಟುಂಬಸ್ಥರು ಮೆರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ದ.ಕನ್ನಡ ಜಿಲ್ಲೆಯಲ್ಲಿ ಮೂರು ದಿನ ನಿಷೇಧಾಜ್ಞೆ

Operation Sindoor: ಐಪಿಎಲ್‌ ಫೈನಲ್‌ನಲ್ಲಿ ಗೌರವಕ್ಕೆ ಒಳಗಾಗುವ ಮೂವರು ದೇಶದ ಅಧಿಕಾರಿಗಳು ಇವರೇ

ರಾಜ್ಯದಲ್ಲಿ ಕೊತ್ವಾಲ್‌ ಶಿಷ್ಯಂದಿರು ವಿಜೃಂಭಿಸುತ್ತಿದ್ದಾರೆ: ಜೆಡಿಎಸ್‌

ಪಾಕಿಸ್ತಾನ ಪರ ಬೇಹುಗಾರಿಕೆ: ಪಾಕ್‌ರೊಂದಿಗಿನ ಜ್ಯೋತಿ ಮಲ್ಹೋತ್ರಾ ಲಿಂಗ್ ಕೇಳಿದ್ರೆ ದಂಗಾಗ್ತೀರಾ

ಕನ್ನಡ ಭಾಷೆಗೆ ಅಪಮಾನ ಮಾಡದಿರಿ, ಇದನ್ನು ಸಹಿಸಲು ಅಸಾಧ್ಯ: ಸಿಟಿ ರವಿ

ಮುಂದಿನ ಸುದ್ದಿ
Show comments