Select Your Language

Notifications

webdunia
webdunia
webdunia
Sunday, 13 April 2025
webdunia

ಸುವರ್ಣ ಸೌಧದೊಳಗೆ ಕಬ್ಬು ತುಂಬಿದ ಲಾರಿ ಚಲಾಯಿಸಿದ ರೈತರು

ಸುವರ್ಣ ಸೌಧ
ಬೆಳಗಾವಿ , ಭಾನುವಾರ, 18 ನವೆಂಬರ್ 2018 (13:33 IST)
ಕಬ್ಬು ತುಂಬಿದ ಲಾರಿಯನ್ನು ತಡೆದು, ಆ ಲಾರಿಯನ್ನು ಸುವರ್ಣಸೌಧದ ಒಳಗಡೆ ಹಾಕಿ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬೆಳಗಾವಿಯ ಸುವರ್ಣ ಸೌಧದ ಮುಂದೆ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡಿರುವ ರೈತರು, ಕಬ್ಬು ತುಂಬಿದ ಲಾರಿಯನ್ನ ಸುವರ್ಣ ಸೌಧ ಒಳ ಹಾಕಿ ಪ್ರತಿಭಟನೆ ನಡೆಸಿದರು.

ರೈತರೇ ಲಾರಿಯನ್ನ ಚಲಾಯಿಸಿ ಸುವರ್ಣ ಸೌಧದ ಒಳಗೆ ಹಾಕಲು ಯತ್ನಿಸಿದರು.

ಸುವರ್ಣ ಸೌಧದ ಗೇಟ್ ತೆಗೆದು ಒಳ ಹೋದ ಲಾರಿಗೆ ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ರೈತರು ಮೂರು ಲಾರಿಗಳನ್ನು ಸುವರ್ಣ ಸೌಧದ ಒಳಗೆ ಚಲಾಯಿಸಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಧರ್ಮಗುರುವಿಗೆ ಸಂತ್ರಸ್ತೆಯ ತಂದೆ ಮಾಡಿದ್ದೇನು ಗೊತ್ತಾ?