Select Your Language

Notifications

webdunia
webdunia
webdunia
webdunia

ರೈತರ ಪ್ರತಿಭಟನೆ ವಾಪಸ್

ರೈತರ ಪ್ರತಿಭಟನೆ ವಾಪಸ್
ಬೆಂಗಳೂರು , ಗುರುವಾರ, 9 ಡಿಸೆಂಬರ್ 2021 (16:10 IST)
ರೈತ ಸಂಘಟನೆಗಳು ಕಳೆದ 1 ತಿಂಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಇಂದು ಅಧಿಕೃತವಾಗಿ ಹಿಂಪಡೆದಿದೆ.
 
ವಿವಾದಿತ ಕೃಷಿ ಮಸೂದೆ ರದ್ದಿಗೆ ಆಗ್ರಹಿಸಿ ರೈತ ಸಂಘಟನೆಗಳು ಕಳೆದ 378 ದಿನಗಳಿಂದ ದೆಹಲಿಯ ಸಿಂಘು ಗಡಿಯಲ್ಲ ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ಈ ಜಾಗವನ್ನು ತೆರವು ಮಾಡುವುದಾಗಿ ತಿಳಿಸಿವೆ.ಕೃಷಿ ಮಸೂದೆ ವಾಪಸ್ ಪಡೆದ ನಂತರವೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದವು. ಕೇಂದ್ರ ಸರಕಾರ ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಲು ಪಟ್ಟು ಹಿಡಿದಿದ್ದವು.
 
ಕೇಂದ್ರ ಸರಕಾರ ಬೇಷರತ್ತಾಗಿ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆಯುವುದಾಗಿ ಘೋಷಿಸಿದವು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮೊದಲನೇ ಸ್ಥಾನ