Select Your Language

Notifications

webdunia
webdunia
webdunia
webdunia

ಭವಾನಿ ಅಕ್ಕಗೆ ಟಿಕೆಟ್​ ನೀಡಿ ಎಂದ ಅಭಿಮಾನಿ

ಭವಾನಿ ಅಕ್ಕಗೆ ಟಿಕೆಟ್​ ನೀಡಿ ಎಂದ ಅಭಿಮಾನಿ
ಹಾಸನ , ಮಂಗಳವಾರ, 4 ಏಪ್ರಿಲ್ 2023 (14:30 IST)
ಹಾಸನದಲ್ಲಿ JDS ಟಿಕೆಟ್ ಕದನ ಜೋರಾಗಿದೆ ಭವಾನಿ ರೇವಣ್ಣಗೆ ಟಿಕೆಟ್​​ ನೀಡುವಂತೆ ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಭವಾನಿ ರೇವಣ್ಣ ಅಭಿಮಾನಿ, ಮಹಿಳಾ ಕಾರ್ಯಕರ್ತೆ ಚೈತ್ರಾ ವಿಡಿಯೋ ಮಾಡಿ ಭವಾನಿಗೆ ಟಿಕೆಟ್​ ನೀಡುವಂತೆ ಒತ್ತಾಯಿಸಿದ್ದಾರೆ. ಹಾಸನದ ಶಾಸಕರು ರೇವಣ್ಣ ಕುಟುಂಬಕ್ಕೆ ಪಂಥಾಹ್ವಾನ ನೀಡಿದ್ದಾರೆ.. ಶಾಸಕ ಪ್ರೀತಂ ಗೌಡ ಮಣಿಸಲು ಭವಾನಿ ಅಕ್ಕನಿಗೆ ಟಿಕೆಟ್ ಕೊಡಬೇಕು ಎಂದು ಮಹಿಳಾ ಕಾರ್ಯಕರ್ತೆ ಮಾಜಿ ಸಿಎಂ H.D. ಕುಮಾರಸ್ವಾಮಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ. ಹಾಸನ ಟಿಕೆಟ್ ಫೈಟ್ ಕ್ಲೈಮ್ಯಾಕ್ಸ್ ತಲುಪಿದ ಹಿನ್ನೆಲೆಯಲ್ಲಿ ಭವಾನಿಗೆ ಟಿಕೆಟ್ ನೀಡುವಂತೆ ಒತ್ತಡ ಹೆಚ್ಚಾಗಿದೆ. ಸ್ವರೂಪ್ ಅವರ ಕುಟುಂಬಕ್ಕೆ ಆರು ಬಾರಿ ಟಿಕೆಟ್ ನೀಡಲಾಗಿದೆ. ಸ್ವರೂಪ್ ತಂದೆ H.S. ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಎರಡು ವರ್ಷಗಳಿಂದ ಭವಾನಿ ಹಾಸನ ಕ್ಷೇತ್ರದ ಕಾರ್ಯಕರ್ತರ ನೋವಿಗೆ ಸ್ಪಂದಿಸಿದ್ದಾರೆ... ಸತತವಾಗಿ ಕಾರ್ಯಕರ್ತರ ಸಂಪರ್ಕದಲ್ಲಿದ್ದು, ಪಕ್ಷ ಸಂಘಟನೆ ಮಾಡಿದ್ದಾರೆ. ಹಾಗಾಗಿ ಇದೊಂದು ಬಾರಿ ಭವಾನಿ ರೇವಣ್ಣಗೆ ಅವಕಾಶ ನೀಡಿ ಎಂದು JDS ಕಾರ್ಯಕರ್ತೆ ಚೈತ್ರಾ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆನರಸೀಪುರದಲ್ಲಿ ರೇವಣ್ಣ ಪ್ರಚಾರ