Select Your Language

Notifications

webdunia
webdunia
webdunia
webdunia

ತೆಲಗಿ ಮೃತದೇಹ ಎದುರು ಸಂಬಂಧಿಕರ ಗಲಾಟೆ…?

ತೆಲಗಿ ಮೃತದೇಹ ಎದುರು ಸಂಬಂಧಿಕರ ಗಲಾಟೆ…?
ಬೆಳಗಾವಿ , ಶನಿವಾರ, 28 ಅಕ್ಟೋಬರ್ 2017 (10:44 IST)
ಬೆಳಗಾವಿ: ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಶವ ಹುಟ್ಟೂರು ಖಾನಾಪುರ ತಲುಪಿದೆ.

ತೆಲಗಿ ಹೆಣದ ಮುಂದೆ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕರೀಂಲಾಲ್ ತೆಲಗಿ ಮಗಳು ಮತ್ತು ತೆಲಗಿ ತಮ್ಮನ ನಡುವೆ ವಾಗ್ವಾದ ನಡೆದಿದೆ. 'ಆಸ್ಪತ್ರೆಯಲ್ಲಿ ಇದ್ದಾಗ ನೋಡಲು ಬಾರದ ನೀವು ಈಗ ಅಂತ್ಯಕ್ರಿಯೆಗೆ ಬಂದಿದ್ದೇಕೆ' ಎಂದು ತೆಲಗಿ ಮಗಳು ಸನಾ, ಚಿಕ್ಕಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಘಟನೆ ನಂತರ ತೆಲಗಿ ಸಹೋದರ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಬ್ದುಲ್ ಕರೀಂಲಾಲ್‌ ತೆಲಗಿಗೆ ಅನಾರೋಗ್ಯದ ಕಾರಣ ಅಕ್ಟೋಬರ್ 16 ರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೆಲಗಿ ಅ.26ರಂದು ಮಧ್ಯಾಹ್ನ ಸಾವನ್ನಪ್ಪಿದ್ದ. ಬಳಿಕ ತೆಲಗಿ ಮೃತದೇಹವನ್ನು ಹುಟ್ಟೂರು ಖಾನಾಪುಕ್ಕೆ ರವಾನೆ ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಬರುವ ಪ್ರಧಾನಿ ಮೋದಿ ಜತೆ ಬಿಜೆಪಿ ನಾಯಕರ ಮೀಟಿಂಗ್