Publish Date: Mon, 06 Feb 2017 (08:54 IST)
Updated Date: Mon, 06 Feb 2017 (09:05 IST)
ನಕಲಿ ಛಾಪಾ ಕಾಗದ ಹಗರಣದಲ್ಲಿ ಜೈಲು ಸೇರಿರುವ ಕರೀಂ ಲಾಲ ತೆಲಗಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಮರ್ಯಾದೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದ ಮಾಜಿ ಕೈದಿ ಮನೋಜ್ ಪವಾರ್ ಸಿಐಡಿಗೆ ಪತ್ರ ಬರೆದಿದ್ದಾರೆ.
ಜೈಲಧಿಕಾರಿಗಳು ಜೈಲಿನಲ್ಲಿ ತೆಲಗಿಗೆ ರಾಜಮರ್ಯಾದೆ ನೀಡುತ್ತಿದ್ದಾರೆ. ರಾಜಾರೋಶವಾಗಿ ತೆಲಗಿ ಮೊಬೈಲ್ ಬಳಸುತ್ತಿದ್ದು, ಅವ್ಯವಹಾರವನ್ನ ಮುಂದುವರೆಸಿದ್ದಾನೆ. ಮಾದಕ ವಸ್ತುಗಳು ಸಹ ಸರಬರಾಜಾಗುತ್ತಿದ್ದು, ಇದಕ್ಕೆ ಜೈಲಧಿಕಾರಿಗಳ ಸಹಕಾರ ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.