Select Your Language

Notifications

webdunia
webdunia
webdunia
webdunia

ಕಣಕ್ಕಿಳಿದ ಕರುಣಾಕರ ರೆಡ್ಡಿ, ಎಂಪಿ ರವೀಂದ್ರ

ಕಣಕ್ಕಿಳಿದ ಕರುಣಾಕರ ರೆಡ್ಡಿ, ಎಂಪಿ ರವೀಂದ್ರ
ದಾವಣಗೆರೆ , ಸೋಮವಾರ, 23 ಏಪ್ರಿಲ್ 2018 (18:22 IST)
ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಕರುಣಾಕರ ರೆಡ್ಡಿ ಹಾಗೂ ಶಾಸಕ ಎಂ.ಪಿ ರವೀಂದ್ರ ನಾಮಪತ್ರ ಸಲ್ಲಿಸಿದ್ದಾರೆ. ಸಾವಿರಾರು ಬೆಂಬಲಿಗರೊಂದಿಗೆ  ಮೆರವಣಿಗೆ ಮೂಲಕ ಮಿನಿ‌ ವಿಧಾನಸೌಧಕ್ಕೆ  ಆಗಮಿಸಿದ ಇಬ್ಬರೂ ನಾಯಕರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರುಣಾಕರ ರೆಡ್ಡಿ, ಮಾಜಿ ಸಚಿವನಾಗಿ ಕ್ಷೇತ್ರದ ಶಾಸಕನಾಗಿ ಮಾಡಿದ ಕೆಲಸ ಮೆಚ್ಚಿ ಬಿಜೆಪಿ ಟಿಕೆಟ್ ನೀಡಿದೆ. ಶ್ರೀ‌ರಾಮುಲು ಹಾಗೂ ಜನಾರ್ಧನ ರೆಡ್ಡಿಯವರನ್ನು ಪ್ರಚಾರಕ್ಕೆ ಕರೆತರಲು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
 
ಎಂಪಿ ರವೀಂದ್ರ ಮಾತನಾಡಿ, ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ತಾಲ್ಲೂಕು ಸೇರ್ಡೆಯಿಂದ 371 ಜೆ ಕಾಲಂಗೆ ಸೇರ್ಪಡೆಯಾಗಲಿದ್ದು ಕ್ಷೇತ್ರದ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿದ್ದಾರೆ. ಗಣಿಧಣಿಗಳ ಹೆಲಿಕಾಪ್ಟರ್ ಗಳ ರೆಕ್ಕೆ ಮುರಿದು ಧೂಳು ತುಂಬಿವೆ ಎಂದು ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾದಾಮಿಯಲ್ಲಿ ಪ್ರಚಾರಕ್ಕೆ ಹೋಗುವೆ: ಸತೀಶ ಜಾರಕಿಹೋಳಿ