Webdunia - Bharat's app for daily news and videos

Install App

ಸೈಯದ್ ಇಸಾಕ್ ಗೆ ಸನ್ಮಾನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

Webdunia
ಮಂಗಳವಾರ, 31 ಆಗಸ್ಟ್ 2021 (20:51 IST)
ಬೆಂಗಳೂರು: ಕನ್ನಡದ ಮೇಲಿನ ಅಭಿಮಾನದ ಕಾರಣಕ್ಕಾಗಿ ಒಂದು ಗ್ರಂಥಾಲಯವನ್ನು ನಡೆಸುತ್ತಿದ್ದ ಮೈಸೂರಿನ ಸೈಯದ್ ಇಸಾಕ್ ಸನ್ಮಾನಿಸಿರುವುದು ಅವಿಸ್ಮರಣೀಯ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.  
 
ನಗರದ ವಿಜಯನಗರದ ಜ್ಞಾನಯೋಗ ಮಂದಿರದಲ್ಲಿ ಕರ್ನಾಟಕ ಪ್ರಕಾಶನ ಸಂಘವು ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ಹಾಗೂ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪ್ರಧಾನ ಸಮಾರಂಭ ಸೋಮವಾರ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಸೈಯ್ಯದ್ ಇಸಾಕ್ , ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿಯನ್ನು ಆರ್. ಪೂರ್ಣಿಮಾ ಸ್ವೀಕರಿಸಿದರು.
 
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ  ನಮ್ಮ ನಡುವೆ ಅನೇಕ ಮಾದರಿಗಳಿವೆ. ಆದರೆ, ಅನುಕರಿಸಬಹುದಾದ ಮಾದರಿಗಳು ಕಡಿಮೆ. ಕನ್ನಡ ಸೇವೆಯಲ್ಲಿ ನಿರತರಾದ ಸೈಯ್ಯದ್ ಇಸಾಕ್ ಹಾಗೂ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪುರಸ್ಕೃತೆ ಆರ್. ಪೂರ್ಣಿಮಾ ಅವರಂತಹ ಅನುಕರಣೀಯ ಮಾದರಿಗಳನ್ನು ಗುರುತಿಸಿ ಗೌರವಿಸುತ್ತಿರುವ ಕರ್ನಾಟಕ ಪ್ರಕಾಶನ ಸಂಘದ ಶ್ರಮ ಶ್ಲಾಘನೀಯ ಎಂದರು.
 
ಈ ಸಂದರ್ಭದಲ್ಲಿ ಸೈಯ್ಯದ್ ಇಸಾಕ್ ಮಾತನಾಡಿ ನಾನು ವಿದ್ಯಾದೇಗುಲಕ್ಕೆ ತೆರಳಲಿಲ್ಲ, ವಿದ್ಯಾಭ್ಯಾಸ ಮಾಡಿಲ್ಲ. ಕೂಲಿ ಮಾಡಿಕೊಂಡು ಬದುಕಿದ್ದವ. ಕನ್ನಡದ ಬಗೆಗಿನ ಪ್ರೀತಿ ಹೆಚ್ಚಲು ಡಾ.ರಾಜಕುಮಾರ ಅವರ ಕನ್ನಡ ಸಿನಿಮಾಗಳೇ ಪ್ರೇರಣೆಯಾದವು.ಅದರಿಂದ ಕನ್ನಡ ಪುಸ್ತಕಗಳೆಡೆ ಆಸಕ್ತಿ ಬೆಳೆಯಿತು. ಅವುಗಳನ್ನು ತಂದು ತಂದು ಜೋಪಾನವಾಗಿರಿಸಿದ್ದೆ. ಈ ಕೆಲಸಕ್ಕೆ ಸಮಾಜ ನನ್ನನ್ನು ಗುರುತಿಸಿದೆ ಮಾತ್ರವಲ್ಲ. ಕನ್ನಡ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು.
 
ಡಾ. ರಾಜ್ ರ ಕನ್ನಡ ಕಳಕಳಿ, ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಆಶಿಸಿದ ಸೈಯ್ಯದ್ ಇಸಾಕ್, ತಮಗೆ ಪ್ರಶಸ್ತಿ ಲಭಿಸಿದ್ದರೂ ಹೊಣೆಗಾರಿಕೆ ಹೆಚ್ಚಿದೆ. ಆದ್ದರಿಂದ, ತಾವು ಮತ್ತಷ್ಟು ಕನ್ನಡ ಸೇವೆಗೆ ಬದ್ಧರಿರುವುದಾಗಿ ಹೇಳಿದರು.
 
ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪುರಸ್ಕೃತೆ ಆರ್. ಪೂರ್ಣಿಮಾ ಸಮಾರಂಭದಲ್ಲಿ  ಮಾತನಾಡಿ, ಧೀಮಂತ ಮಹಿಳೆ, ಮೊಟ್ಟಮೊದಲ ಪ್ರಕಾಶಕಿಯ ಹೆಸರಿನಲ್ಲಿ ಪ್ರಶಸ್ತಿ ಲಭಿಸುತ್ತಿರುವುದು ತವರು ಮನೆಯಲ್ಲಿ ಬಾಗಿನ ಸಿಕ್ಕ ಸಂಭ್ರಮ ಹುಟ್ಟುಹಾಕಿದೆ ಎಂದರು.
 
ಲೇಖಕಿ ಡಾ ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರವಂತರು ಮಾತ್ರ ಸುಶಿಕ್ಷಿತರು ಎನ್ನಲಿಕ್ಕಾಗದು. ಸೈಯ್ಯದ್ ಇಸಾಕ್ ಅಂತಹ ವ್ಯಕ್ತಿಗಳು ಎಲೆಮರೆಯ ಕಾಯಿಯಂತೆ ಸದ್ದಿಲ್ಲದೇ ಸಾಹಿತ್ಯ ಸೇವೆ ಮಾಡುತ್ತಿದ್ದು, ಆರ್. ಪೂರ್ಣಿಮಾ ಅವರಂತಹ ದಿಟ್ಟ ಲೇಖಕಿಯರು ಅದೆಷ್ಟೋ ಮಹಿಳೆಯರಿಗೆ ದಾರಿ ತೋರಿದ್ದಾರೆ ಎಂದು ತಿಳಿಸಿದರು.
school

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್

Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮುಂದಿನ ಸುದ್ದಿ
Show comments