Publish Date: Tue, 04 Oct 2022 (21:40 IST)
Updated Date: Tue, 04 Oct 2022 (21:43 IST)
ಕುಡಿದ ಅಮಲಿನಲ್ಲಿದ್ದ ದುರ್ಗೇಶ್ ಅಲಿಯಾಸ್ ಚಿನ್ನಾ 24 ವರ್ಷದ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ.ಚಿಂತಾಮಣಿ ನಗರದ ವಿನಾಯಕ ಶೋರೂಂ ಎದುರು ಇರುವ ಸ್ಪೆಕ್ಸ್ ಇನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಎಂಬುದು ತಿಳಿದುಬಂದಿದೆ.
ಇನ್ನೂ ಸೋಮವಾರ ರಾತ್ರಿ ಕುಡಿದ ಮತ್ತಿನಲ್ಲಿ ನಡೆದಿರುವ ಘಟನೆ ಇದ್ದಾಗಿದ್ದು ,ಸ್ಥಳಕ್ಕೆ ಎ.ಎಸ್ಪಿ ಕುಶಾಲ್ ಚೌಕ್ಸೆ,ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸುದಾಕರರೆಡ್ಡಿ, ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ನಡೆದಿದೆ.