Select Your Language

Notifications

webdunia
webdunia
webdunia
webdunia

ಕುಡುಕನ ಆಟಾಟೋಪಕ್ಕೆ ಆರು ಮಂದಿ ಸಜೀವ ದಹನ

ಕುಡುಕನ ಆಟಾಟೋಪಕ್ಕೆ ಆರು ಮಂದಿ ಸಜೀವ ದಹನ
ಕೊಡಗು , ಸೋಮವಾರ, 5 ಏಪ್ರಿಲ್ 2021 (09:12 IST)
ಕೊಡಗು: ಪತ್ನಿಯ ಜೊತೆ ಜಗಳವಾಡಿದ ಬಳಿಕ ಕುಡುಕ ಪತಿರಾಯ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಆರು ಮಂದಿ ಸಜೀವ ದಹನವಾದ ಘಟನೆ ಕೊಡಗಿನಲ್ಲಿ ನಡೆದಿದೆ.


ಆರು ಮಂದಿ ಬೆಂಕಿಗೆ ಆಹುತಿಯಾಗಿದ್ದು, ಈ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮದ್ಯದ ಅಮಲಿನಲ್ಲಿ ಆರೋಪಿ ತಾವು ನೆಲೆಸಿದ್ದ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ವೇಳೆ ಎಲ್ಲರೂ ಕೊಠಡಿಯಲ್ಲಿ ಮಲಗಿದ್ದರು. ಹೀಗಾಗಿ ಆರೋಪಿಯ ಕೃತ್ಯ ಯಾರಿಗೂ ಗೊತ್ತಾಗಿರಲಿಲ್ಲ. ತನ್ನ ಮಗು ಮತ್ತು ಪತ್ನಿ ಮಲಗಿದ ಕೊಠಡಿಗೇ ಬೆಂಕಿ ಹಚ್ಚಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಧರ ಪ್ರಾಣ ವ್ಯರ್ಥವಾಗಲು ಬಿಡೆವು: ಅಮಿತ್ ಶಾ