Publish Date: Wed, 14 Nov 2018 (14:08 IST)
Updated Date: Wed, 14 Nov 2018 (14:10 IST)
ಬೆಂಕಿ ಜ್ವಾಲೆಯಿಂದ ಧಗಧಗನೆ ಹೊತ್ತಿ ಉರಿದು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸಿದ ಟ್ರ್ಯಾಕ್ಟರ್ ಕೆಲಹೊತ್ತು ಭಯದ ವಾತಾವರಣ ನಿರ್ಮಾಣ ಮಾಡಿದ ಘಟನೆ ನಡೆದಿದೆ.
ಬೆಂಕಿಯಿಂದ ಉರಿಯುತ್ತಿದ್ದ ಟ್ರ್ಯಾಕ್ಟರ್ ನ್ನೇ ಕೆರೆಯವರೆಗೆ ಡ್ರೈವಿಂಗ್ ಮಾಡಿ, ಕೆರೆಗೆ ಇಳಿಸಿ ಚಾಲಕ ಯಂಕಪ್ಪ ಅನಾಹುತ ತಪ್ಪಿಸಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇವು ಕೊಂಡೊಯ್ಯುತ್ತಿದ್ದ ವೇಳೆ ಶಾಟ೯ ಸಕಿ೯ಟ್ ನಿಂದ ಹೊತ್ತಿಕೊಂಡಿತು ಬೆಂಕಿ ಜ್ವಾಲೆ. ಉರಿಯುತ್ತಿದ್ದ ಟ್ರಾಕ್ಟರ್ ನ್ನು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸುತ್ತಾ ಕೆರೆಗೆ ಟ್ರ್ಯಾಕ್ಟರ್ ಕೊಂಡೊಯ್ದರು ಚಾಲಕ ಯಂಕಪ್ಪ. ರೈತ ಸಂಜೀವ ಜಲಗೇರಿ ಎಂಬುವವರಿಗೆ ಸೇರಿದ ಮೇವು ಭಸ್ಮವಾಗಿದೆ.
ಕೆರೆಯ ಮದ್ಯದವರೆಗೂ ಟ್ರ್ಯಾಕ್ಟರ್ ಇಳಿಸಿ ನೀರು ಹಾಕಿ ಬೆಂಕಿಯನ್ನು ಗ್ರಾಮಸ್ಥರು ನಂದಿಸಿದರು. ಸುಡುತ್ತಿದ್ದ ಮೇವಿನ ಬಣವಿಗೆ ನೀರು ಹಾಕಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಘಟನೆಯಲ್ಲಿ 30 ಸಾವಿರ ಮೌಲ್ಯದ ಮೇವು ಸೇರಿದಂತೆ ಟ್ರ್ಯಾಕ್ಟರ್ ಇಂಜಿನ್ ಗೂ ಹಾನಿಯಾಗಿದೆ.