Publish Date: Sat, 06 Jun 2020 (13:47 IST)
Updated Date: Sat, 06 Jun 2020 (13:49 IST)
ಲಾಕ್ ಡೌನ್ ಸಡಿಲಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಚಾರ ಆರಂಭಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ ಆರಂಭಗೊಂಡಿದೆ. ಈ ಮಧ್ಯೆ ಸೋಂಕು ತಗುಲದಂತೆ ಅಗತ್ಯ ಮುಂಜಾಗ್ರತೆ ವಹಿಸಿರುವ ಖಾಸಗಿ ಬಸ್ ಗಳ ನಿವಾ೯ಹಕರು , ಇದೀಗ ಪಿಪಿಇ ಕಿಟ್ ಮಾದರಿಯ ರಕ್ಷಾ ಕವಚ ಧರಿಸಲು ಮುಂದಾಗಿದ್ದಾರೆ.
ಮಂಗಳೂರು ನಗರದ ಕೆಲವು ರೂಟ್ ಗಳ ಸಿಟಿ ಬಸ್ ಗಳಲ್ಲಿ ನಿವಾ೯ಹಕರು ಪಿಪಿಇ ಕಿಟ್ ಮಾದರಿ ರಕ್ಷಾ ಕವಚ ಧರಿಸಿ ಕತ೯ವ್ಯ ನಿವ೯ಹಿಸಲು ಆರಂಭಿಸಿದ್ದಾರೆ.
ಕೊರೋನಾ ಸೋಂಕು ಹರಡದಂತೆ ರಕ್ಷಣಾ ಕವಚ ಧರಿಸಿ ಕೆಲಸ ಮಾಡುತ್ತಿರುವುದು ಸಾವ೯ಜನಿಕರ ಪ್ರಶಂಸೆಗೆ ಪಾತ್ರವಾಗಿದೆ.