Select Your Language

Notifications

webdunia
webdunia
webdunia
webdunia

ಮನೆಗಳಿಗೆ ನುಗ್ಗಿದ ಕೊಳಚೆ ನೀರು: ಜನರ ಆಕ್ರೋಶ ಎದುರಿಸಿದ ಜಾರ್ಜ್

ಮನೆಗಳಿಗೆ ನುಗ್ಗಿದ ಕೊಳಚೆ ನೀರು: ಜನರ ಆಕ್ರೋಶ ಎದುರಿಸಿದ ಜಾರ್ಜ್
ಬೆಂಗಳೂರು , ಸೋಮವಾರ, 4 ಸೆಪ್ಟಂಬರ್ 2017 (15:36 IST)
ಧಾರಾಕಾರವಾಗಿ ಸುರಿದ ಮಳೆಗೆ ಮನೆಗೆ ಕೊಳಚೆ ನೀರು ನುಗ್ಗಿರುವುದು ವರದಿಯಾಗುತ್ತಿದ್ದಂತೆ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಚಿವ ಜಾರ್ಜ್ ಸ್ವಕ್ಷೇತ್ರದಲ್ಲಿಯೇ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದರಿಂದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಜನತೆಯ ಆಕ್ರೋಶ ತಿಳಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಆಗಮಿಸಿದ ಸಟಿವ ಜಾರ್ಜ್ ಕೊಳಚೆ ನೀರಿನಲ್ಲಿಯೇ ನಡೆದು ಸ್ಥಳೀಯರ ಮನವಿಗೆ ಸ್ಪಂದಿಸಿದರು.
 
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ರಾಜಕಾಲುವೆಯ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
 
ಬಿಬಿಎಂಪಿ ಅಧಿಕಾರಿಗಳ ನಿರಂತರ ಅಶ್ವಾಸನೆ ನಡುವೆಯೂ ಮನೆಗಳಿಗೆ ನೀರು ನುಗ್ಗುತ್ತಿರುವುದು ಮತ್ತು ರಸ್ತೆಗಳು ಜಲಾವೃತ್ತವಾಗಿರುವುದು ಜನತೆಯಲ್ಲಿ ಆಕ್ರೋಶ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಶಾಂತಿ ಕದಡಿದ್ರೆ ಕ್ರಮ ಕೈಗೊಳ್ಳಿ: ಗೃಹ ಸಚಿವರಿಗೆ ಸಿಎಂ ಸೂಚನೆ