Select Your Language

Notifications

webdunia
webdunia
webdunia
webdunia

ಡಾ.ರಾಜ್‌ಗೆ ಅಭಿಮಾನಿಗಳು ದೇವರಾದ್ರೆ ನಮಗೆ ಮತದಾರರೇ ದೇವರು: ಸಿಎಂ

ಡಾ.ರಾಜ್‌ಗೆ ಅಭಿಮಾನಿಗಳು ದೇವರಾದ್ರೆ ನಮಗೆ ಮತದಾರರೇ ದೇವರು: ಸಿಎಂ
ಚಿತ್ರದುರ್ಗ , ಶನಿವಾರ, 13 ಮೇ 2017 (16:57 IST)
ನಾನು ಜನತೆಯ ಮೇಲೆ ನಂಬಿಕೆ ಇಟ್ಟವನು. ಜನತೆ ಆಶೀರ್ವಾದ ಮಾಡೇ ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಕಾಂಗ್ರೆಸ್ ಸರಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಟಸಾರ್ವಭೌಮ ಡಾ.ರಾಜಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದರು. ಅದರಂತೆ ನಮಗೆ ಮತದಾರರೇ ದೇವರು. ದೇವರು ಮತ್ತೆ ನಮ್ಮನ್ನು ಆಶೀರ್ವದಿಸಲಿದ್ದಾರೆ ಎನ್ನುವ ಭರವಸೆಯಿದೆ ಎಂದರು.
 
ನಾನು ಕರ್ನಾಟಕ ರಾಜ್ಯದ ಜನರ ನಾಡಿಮಿಡಿತ ಅರಿತಿದ್ದೇನೆ. ಆದ್ದರಿಂದ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
 
ಬಿಜೆಪಿಗೆ ಚಾರ್ಜ್‌ಶೀಟ್ ಅಂದರೆ ಏನು ಅಂತಾನೇ ಗೊತ್ತಿಲ್ಲ. ಜನರೇ ಬಿಜೆಪಿ ಚಾರ್ಜ್‌ಶೀಟ್‌ಗೆ ಬಿ ರಿಪೋರ್ಟ್ ಹಾಕಿ ಡಿಸ್ಮಿಸ್ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
 
ಬಿಜೆಪಿ ಮಿಷನ್ 150 ಎನ್ನುವ ಮೂಲಕ ಜನತೆಯನ್ನು ಅಪಮಾನಿಸುತ್ತಿದೆ. ಬಿಜೆಪಿಯ ಮಿಷನ್ 150 ನುಚ್ಚು ನೂರಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದ ಒತ್ತಡಕ್ಕೆ ಮಣಿದ ಪಾಕ್: ಹಫೀಜ್‌ಗೆ ಮತ್ತೆ ಗೃಹ ಬಂಧನ