Select Your Language

Notifications

webdunia
webdunia
webdunia
webdunia

ಇಂದು ಕೂಡ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಅನುಮಾನ!

ಇಂದು ಕೂಡ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಅನುಮಾನ!
ಬೆಂಗಳೂರು , ಶನಿವಾರ, 8 ಫೆಬ್ರವರಿ 2020 (10:04 IST)
ಬೆಂಗಳೂರು : ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಶಾಸಕರು ಈಗಾಗಲೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಆದರೆ  ನೂತನ ಸಚಿವರಿಗೆ ಇಂದೂ ಖಾತೆ ಹಂಚಿಕೆ ಮಾಡುವುದು ಅನುಮಾನ ಎನ್ನಲಾಗಿದೆ.


ಹೌದು. ಇಂದು ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಹೇಳಿದ್ದರು. ಆದರೆ  ಸದ್ಯದ ಸ್ಥಿತಿಯಲ್ಲಿ ಮೂಲ ಬಿಜೆಪಿಗರನ್ನು ಮನವೊಲಿಸುವುದೇ ಸವಾಲಾಗಿದೆ. ಹೀಗಾಗಿ ಇಂದು ಸಚಿವರಿಗೆ ಖಾತೆ ಹಂಚಿಕೆ ಅನುಮಾನ ಎನ್ನಲಾಗಿದೆ.


ಮತ್ತೊಂದೆಡೆ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿಲ್ಲ. ಖಾತೆ ಹಂಚಿಕೆಗೆ ಹೈಕಮಾಂಡ್ ಅನುಮತಿ ಬೇಕು. ಆದಕಾರಣ ಮುಂದಿನ ವಾರ ಸಿಎಂ ದೆಹಲಿಗೆ ತೆರಳಿ ಈ ಬಗ್ಗೆ ಚರ್ಚೆ ನಡೆಸಲಿದ್ದು,  ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಖಾತೆ ಹಂಚಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ