Select Your Language

Notifications

webdunia
webdunia
webdunia
webdunia

ದೊರೆಸ್ವಾಮಿ ಆನೆಯೋ, ಹಂದಿನೋ ಎಂದ ಶಾಸಕ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಾಕಿಸ್ತಾನ್ ಏಜೆಂಟ್ ಅಂತ ಜರಿದಿದ್ದ ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಸಾಣೇಹಳ್ಳಿಯ ಸ್ವಾಮೀಜಿಯು ದೊರೆಸ್ವಾಮಿ ಪರವಾಗಿ ಮಾತನಾಡಿದ್ದರು. ಆನೆ ನಡೆಯೋವಾಗ ನಾಯಿ ಬೊಗಳಿದರೆ ಏನೂ ಆಗೋದಿಲ್ಲ ಅಂತ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರೋ ಬಸನಗೌಡ ಪಾಟೀಲ್ ಯತ್ನಾಳ್, ದೊರೆಸ್ವಾಮಿ ಆನೆಯೋ ಅಥವಾ ಹಂದಿನೋ ಅನ್ನೋದು ಯಾರಿಗೆ ಗೊತ್ತು ಅಂತ ಟೀಕೆ ಮಾಡಿದ್ದಾರೆ.  

ಸ್ವಾತಂತ್ರ್ಯ ಹೋರಾಟದಲ್ಲಿ ದೊರೆಸ್ವಾಮಿ ಎಷ್ಟು ಲಾಠಿ ಏಟು ತಿಂದಿದ್ದಾರೆ? ವೀರ್ ಸಾವರ್ಕರ್ ರಷ್ಟು ಲಾಠಿ ಏಟು ತಿಂದಿದ್ದಾರಾ? ಅಂತ ಪ್ರಶ್ನೆ ಮಾಡಿ ಮತ್ತೊಮ್ಮೆ ಕುಟುಕಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಸ್ಟೈಲ್ ನಲ್ಲಿ ರೌಡಿ ಶೀಟರ್ ಮೇಲೆ ಹಲ್ಲೆ – ಬೆಚ್ಚಿ ಬಿದ್ದ ಜನತೆ