Select Your Language

Notifications

webdunia
webdunia
webdunia
Wednesday, 9 April 2025
webdunia

ಸಿಎಂ ಬಿಎಸ್ ವೈ ಭೇಟಿಗೆ ಬಂದಾಗಲೂ ಮುನಿಸು ಮುಂದುವರಿಸಿದ ಬಿಜೆಪಿ ನಾಯಕರು

ಬೆಂಗಳೂರು
ಬೆಂಗಳೂರು , ಶುಕ್ರವಾರ, 28 ಫೆಬ್ರವರಿ 2020 (10:19 IST)
ಬೆಂಗಳೂರು : ಸಿಎಂ ಬಿಎಸ್ ವೈ ಭೇಟಿಗೆ ಬಂದಾಗಲೂ ಸಂಸದ ಬಿಎನ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಅವರು ಒಬ್ಬರ ಮುಖ ಮತ್ತೊಬ್ಬರು ನೋಡದೆ ಮುನಿಸು ಮುಂದುವರಿಸಿದ್ದಾರೆ ಎನ್ನಲಾಗಿದೆ.


ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ  ಸಂಸದ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೊದಲು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ  ಸಂಸದ ಬಚ್ಚೇಗಡರು ಎಂಟಿಬಿ ನಾಗರಾಜ್  ಸಿಎಂ ಭೇಟಿಯಾಗಲು  ಬರ್ತಿದ್ದ ವಿಚಾರ ತಿಳಿದು ಸಿಎಂ ನಿವಾಸದಿಂದ ಹೊರಬಂದಿದ್ದಾರೆ.


ಸಿಎಂ ನಿವಾಸದ ಮುಂದೆ ನಾಯಕರಿಬ್ಬರು ಮುಖಾಮುಖಿಯಾದ್ರೂ ಮಾತಿಲ್ಲ ಕಥೆಯಿಲ್ಲದೆ ಒಬ್ಬರ ಮುಖ ಮತ್ತೊಬ್ಬರು ನೋಡದೆ ತಮ್ಮ ಮುನಿಸನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೂಟ್ ಕೇಸ್ ಒಳಗೆ ಉಸಿರುಗಟ್ಟಿಸಿ ಬಾಯ್ ಫ್ರೆಂಡ್ ಸಾಯಿಸಿದ ಮಹಿಳೆ